WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಗುರು ರಾಘವೇಂದ್ರ ಸ್ವಾಮಿಗಳನ್ನು ನೆನಪು ಮಾಡಿಕೊಂಡ ತಕ್ಷಣ ನಮ್ಮ ನಿಮ್ಮೆಲ್ಲರ ಮನಸ್ಸಿನಲ್ಲಿ ಗುರು ಸಾರ್ವಭೌಮರು ವೃಂದಾವನಸ್ಥರಾಗಿರುವ ಮಂತ್ರಾಲಯ ಕ್ಷೇತ್ರ ನೆನಪಾಗುತ್ತದೆ. ಮಂತ್ರಾಲಯವೂ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲೂಕಿನಲ್ಲಿ ಇದ್ದು, ಈ ಕ್ಷೇತ್ರಕ್ಕೆ ಭೇಟಿ ನೀಡುವ ಕನ್ನಡಿಗರ ಸಂಖ್ಯೆಗೆ ಲೆಕ್ಕವೇ ಇಲ್ಲ. ರಾಯಚೂರು ಇಂದ 43 ಕಿಮೀ ದೂರದಲ್ಲಿರುವ ಈ ಪುಣ್ಯ ಕ್ಷೇತ್ರದ ಬಗ್ಗೆ ಸಾಕಷ್ಟು ಜನರು ಕೇಳಿಯೇ ಇರ್ಥಿರ. ಆದ್ರೆ ಮಂತ್ರಾಲಯ ಮಾತ್ರವಲ್ಲದೆ ಗುರು ರಾಯರ ಸಾನಿಧ್ಯ ಇರುವ ಈ ಪುಣ್ಯ ಕ್ಷೇತ್ರಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಬನ್ನಿ ಇವತ್ತಿನ ಲೇಖನದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಗುರು ರಾಯರ ಕ್ಷೇತ್ರಗಳು ಯಾವುದು ಎಂದು ತಿಳಿದುಕೊಂಡು ಬರೋಣ. ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯ, ಬಿಚ್ಚಾಲೆ. ಬಿಚ್ಚಾಲೇ ಅಥವಾ ಬಿಚ್ಚಾಲಿ ಎಂಬ ಹೆಸರಿನಿಂದ ಕರೆಯುವ ಊರಿನಲ್ಲಿ ಗುರು ರಾಯರ ಏಕ ಶಿಲಾ ಬೃಂದಾವನ ಇದ್ದು, ಈ ಸ್ಥಳದಲ್ಲಿ ರಾಯರು 13 ವರ್ಷಗಳ ಕಾಲ ತಪಸ್ಸನ್ನು ಆಚರಿಸಿದ ಪ್ರತೀತಿ ಇದೆ. ಇಂದಿಗೂ ಸಹ ನಾವು ಇಲ್ಲಿ ಗುರು ರಾಯರ ತಪಸ್ಸು ಮಾಡಿದ ಕಟ್ಟೆ, ರಾಯರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳ, ರಾಯರು ಬಳಸುತ್ತಿದ್ದ ಒರಳು ಕಲ್ಲುಗಳನ್ನು ನೋಡಬಹುದಾಗಿದೆ. ತುಂಗಭದ್ರಾ ನದಿಯ ತೀರದಲ್ಲಿ ಇರುವ ಈ ಸ್ಥಳದಲ್ಲಿ ಗುರು ರಾಯರ ಪರಮಪ್ತರಾಗಿದ್ದ ಅಪ್ಪಣ್ಣ ಚಾರ್ಯರು ವಾಸವಾಗಿದ್ದು, ಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಿದ್ದರು, ಇವರ ಭಕ್ತಿಗೆ ಮೆಚ್ಚಿ ಗುರು ರಾಘವೇಂದ್ರ ರು ಈ ಸ್ಥಳದಲ್ಲಿ ಕುಳಿತು ತಪಸ್ಸನ್ನು ಆಚರಿಸಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ. ಮಂತ್ರಾಲಯದಲ್ಲಿ ಆರಾಧಿಸುವ ಆಚರಿಸುವ ಎಲ್ಲಾ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳನ್ನು ಬಿಚ್ಛಾಲೆ ಯಲ್ಲಿಯೂ ಮಾಡಲಾಗುತ್ತಿದ್ದು, ಪ್ರತಿ ವರ್ಷ ರಾಯರ ಆರಾಧನಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಪುಣ್ಯ ಕ್ಷೇತ್ರವೂ ರಾಯಚೂರು ಜಿಲ್ಲೆಯ ಬಿಚ್ಛಾಲೇ ಎಂಬ ಜಾಗದಲ್ಲಿ ಇದೆ. ಈ ಪುಣ್ಯ ಕ್ಷೇತ್ರವನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ನಂಜನಗೂಡು ರಾಘವೇಂದ್ರ ಸ್ವಾಮಿ ಮಠ.

ಸಾಮಾನ್ಯವಾಗಿ ರಾಯರ ಎಲ್ಲಾ ಕ್ಷೇತ್ರಗಳಲ್ಲೂ ಗುರು ರಾಘವೇಂದ್ರರ ಬೃಂದಾವನವನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ಆದ್ರೆ ನಂಜನಗೂಡಿನ ರಾಯರ ಮಠದಲ್ಲಿ ಮಾತ್ರ ಗುರು ರಾಘವೇಂದ್ರರನ್ನು ವಿಗ್ರಹ ರೂಪದಲ್ಲಿ ಪೂಜಿಸಲಾಗುತ್ತದೆ. ವಿಶ್ವದಲ್ಲಿ ಗುರು ರಾಯರು ವಿಗ್ರಹ ರೂಪದಲ್ಲಿ ಪೂಜೆಗೊಳ್ಳುತ್ತಿರುವ ಏಕೈಕ ಸ್ಥಳ ಎಂದರೆ ಅದು ನಂಜನಗೂಡಿನ ರಾಘವೇಂದ್ರ ಸ್ವಾಮಿ ಮಠ. ಪ್ರತೀಕ ಸನ್ನಿಧಾನ ಎಂದು ಕರೆಯುವ ಈ ಸ್ಥಳದಲ್ಲಿ ಗುರು ರಾಯರು ವಿಗ್ರಹ ರೂಪದಲ್ಲಿ ನೆಲೆ ನಿಲ್ಲುವುದರ ಹಿಂದೆ ಒಂದು ಘಟನೆ ಇದೆ. ಗುರು ರಾಯರನ್ನು ಅನು ದಿನವೂ ನೆನೆಯುತ್ತಾ ಸುಮಾರು 25 ವರ್ಷಗಳ ಕಾಲ ಇಲ್ಲಿ ವಾಸವಾಗಿದ್ದ, ಶ್ರೀ ಸುಗ್ನಾನೇಂದ್ರ ತಿರ್ಥರಿಗೆ ತಮ್ಮ ಕೊನೆಯ ಕಾಲದಲ್ಲಿ ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರ ಸ್ವಾಮಯ ಬೃಂದಾವನದ ಬಳಿಯೇ ವೃಂದಾವನಸ್ಥರಾಗಬೇಕು ಎನ್ನುವ ಬಯಕೆ ಇತ್ತಂತೆ. ತನ್ನ ಆಸೆಯನ್ನು ಪೂರ್ತಿಗೊಳಿಸಲು ಸುಗ್ನಾನೆಂದ್ರ ತೀರ್ಥರು ಮಂತ್ರಾಲಯಕ್ಕೆ ಹೋಗಲು ಅಣಿ ಆದಾಗ ಅವರ ಕನಸಿನಲ್ಲಿ ರಾಯರು ಬಂದು ವತ್ಸ ನೀನು ಮಂತ್ರಾಲಯಕ್ಕೆ ಬರುವ ಅವಶ್ಯಕತೆ ಇಲ್ಲ ನಾನೇ ನೀನು ಇರುವ ಸ್ಥಳದಲ್ಲಿ ವಿಗ್ರಹ ರೂಪದಲ್ಲಿ ಬಂದು ನೆಲೆಸುತ್ತೇನೆ ಎಂದು ಹೇಳಿದರಂತೆ. ತನ್ನ ಶಿಷ್ಯನಿಗೆ ಕೊಟ್ಟ ಮಾತಿನಂತೆ ರಾಯರು ಈ ಸ್ಥಳದಲ್ಲಿ ಮೂರ್ತಿ ರೂಪದಲ್ಲಿ ನೆಲೆಸಿದರು ಎಂದು ಹೇಳಲಾಗುತ್ತದೆ. ಅಲ್ಲದೆ ಗುರು ರಾಘವೇಂದ್ರ ರ ಉತ್ತರಾಧನೆ ದಿನವೇ ಶ್ರೀ ಸುಗ್ನಾನೆಂದ್ರಾ ತೀರ್ಥರು ಈ ಸ್ಥಳದಲ್ಲಿ ರಾಯರ ಪಾದ ಚಾರಣವನ್ನು ಸೇರುತ್ತಾರೆ. ಹೀಗಾಗಿ ಇಲ್ಲಿ ಸುಗ್ನಾನೆಂಧ್ರರ ಬೃಂದಾವನವನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ನೆಲೆಸಿರುವ ಗುರು ರಾಯರನ್ನು ಬೆಳಿಗ್ಗೆ 6 ಮಧ್ಯಾನ 1 ಗಂಟೆವರೆಗೂ ಸಂಜೆ 4 ರಿಂದ ರಾತ್ರಿ 8.30 ರ ವರೆಗೆ ದರ್ಶನ ಮಾಡಬಹುದು. ಈ ಪುಣ್ಯ ಕ್ಷೇತ್ರವೂ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇದೆ. ನಂಜನಗೂಡು ಪಟ್ಟಣದ ಕೇವಲ 2 ಕಿಮೀ ದೂರದಲ್ಲಿರುವ ಈ ಪುಣ್ಯ ಕ್ಷೇತ್ರಕ್ಕೆ ನಂಜಂಗೊಡಿನಿಂದ ಆಟೋ ಮಾಡಿಸಿಕೊಂಡು ಹೋಗಬಹುದು.

ರಾಘವೇಂದ್ರ ಸ್ವಾಮಿ ಮಠ, ಹೊನ್ನಾಳಿ. ತುಂಗಭದ್ರಾ ನದಿಯ ತಟದ ಮೇಲಿರುವ ಹೊನ್ನಾಳಿಯ ರಾಘವೇಂದ್ರ ಸ್ವಾಮಿ ಮಠವನ್ನು ದ್ವಿತೀಯ ಮಂತ್ರಾಲಯ ಎಂದೇ ಕರೆಯಲಾಗುತ್ತದೆ. ಸುಮಾರು 300 ವರ್ಷಗಳಷ್ಟು ಪುರಾತನವಾದ ಈ ಮಠವು ವಿಶಾಲವಾದ ಪ್ರಾಂಗಣ ಗರ್ಭ ಗೃಹ, ಪಡಸಾಲೆಗಳನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಸ್ವತಃ ಗುರು ರಾಘವೇಂದ್ರರೆ ಪ್ರತಿಷ್ಠಾಪಿಸಿದ ಬೃಂದಾವನ ಇದ್ದು, ಈ ಸ್ಥಳದಲ್ಲಿ ಗುರು ರಾಯರು ಇಂದಿಗೂ ಜಾಗೃತ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಮಂಚಲೆಯಲ್ಲಿ ಬೃಂದಾವನವನ್ನು ಪ್ರವೇಶಿಸಿದ ಎರಡು ವರ್ಷಗಳ ನಂತರ ಗುರು ರಾಯರು ಈ ಬೃಂದಾವನವನ್ನು ಪ್ರವೇಶ ಮಾಡಿದರು ಎಂಬ ಐತಿಹ್ಯ ಇದೆ. ಹೊನ್ನಾಳಿಯ ಆಚಾರಿಯೊಬ್ಬರಿಗೆ ಕನಸಿನಲ್ಲಿ ಕಾಣಿಸಿಕೊಂಡ ನಂತರ ರಾಘವೇಂದ್ರ ಸ್ವಾಮಿಗಳು ಯೋಗಿ ರೂಪದಲ್ಲಿ ಬಂದು ತಮ್ಮ ಬೃಂದಾವನವನ್ನು ತಾವೇ ಈ ಕ್ಷೇತ್ರದಲ್ಲಿ ನಿರ್ಮಿಸಿಕೊಂಡರು ಎಂಬ ನಂಬಿಕೆ ಇದೆ. ಇಂದಿಗೂ ಕೂಡ ರಾಘವೇಂದ್ರ ಸ್ವಾಮಿಗಳು ತಂದಿರುವ ಹಿತ್ತಾಳೆಯ ತಟ್ಟೆ, ನರಸಿಂಹ ದೇವರ ಸಾಲಿಗ್ರಾಮ ಹಾಗೂ ಪ್ರಾಣದೇವರ ವಿಗ್ರಹವನ್ನು ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಗಳ ವರೆಗೂ ಭಕ್ತಾದಿಗಳ ದರ್ಶನಕ್ಕೆ ಹೊರ ತೆಗೆದು ಇಡಲಾಗುತ್ತದೆ. ಮಂತ್ರಾಲಯದಲ್ಲಿ ಹೇಗೆ ಗುರು ರಾಯರ ಆರಾಧನೆ ಮಹೋತ್ಸವ ನಡೆಯಿತೋ ಅದೇ ರೀತಿ ಆರಾಧನೆ ಸಮಯದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಗುರುವಾರದಂದು ಬೃಂದಾವನಕ್ಕೆ ವಿಶೇಷ ಪೂಜೆ ಮಾಡಲಾಗುತ್ತದೆ. ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳು ಇಷ್ಟ ಪಟ್ಟು ನೆಲೆಸಿರುವ ಈ ಕ್ಷೇತ್ರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಯಲ್ಲಿದೆ. ಸ್ನೇಹಿತರೆ ಈ ಮೂರು ಕ್ಷೇತ್ರಗಳು ಕರ್ನಾಟಕದಲ್ಲಿ ಇರುವ ರಾಯರ ಸಾನಿಧ್ಯ ಇರುವ ಪುಣ್ಯ ಕ್ಷೇತ್ರಗಳಾಗಿವೆ. ನೀವು ಭೇಟಿ ನೀಡಿ ಕೃತಾರ್ಥರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *