ಹುರುಳಿಕಾಳಿನ ರಸಕ್ಕೆ ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ. ಶೀತದಿಂದ ಗಂಟಲು ನೋವಿದ್ದರೆ ಅರ್ಧ ಚಮಚ ಚಕ್ಕೆ ಪುಡಿಗೆ ಕರಿಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಜೇನುತುಪ್ಪದ ಜೊತೆ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

ಮೋಸಂಬಿ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಗಂಟಲು ನೋವು ಮತ್ತು ಕಡಿತ ನಿವಾರಣೆಯಾಗುತ್ತದೆ.

ಪಚ್ಚಕರ್ಪೂರ ಮತ್ತು ಇಂಗನ್ನು ಸೇರಿಸಿ ಮಾತ್ರೆ ಮಾಡಿ. ಈ ಮಾತ್ರೆಗಳನ್ನು ದಿನಕ್ಕೆ ಎರಡರಂತೆ ಚೀಪಿದರೆ ಗಂಟಲು ನೋವು ಕಡಿಮೆಯಾಗುತ್ತದೆ.

ಗಂಟಲು ಸೋಂಕಿನಿಂದ ಗಂಟಲು ನೋವಿದ್ದರೆ ಪುದೀನ, ಜೇಷ್ಠಮಧು, ಶುಂಠಿ ಮತ್ತು ಎಲಚಿ ಹಣ್ಣಿನ ರಸ ಬೆರಿಸಿ ಸೇವಿಸಿದರೆ ಗಂಟಲು ಸೋಂಕು ಮತ್ತು ನೋವು ಶಮನವಾಗುತ್ತವೆ.

ತುಳಸಿ ರಸಕ್ಕೆ ಬಿಸಿ ನೀರು, ಅರಶಿನ ಮತ್ತು ಸೈಂಧವ ಉಪ್ಪು ಹಾಕಿ ಗಂಟಲಲ್ಲಿ ಗಾರ್ಗಲ್‌ ಮಾಡಿದರೆ ಗಂಟಲು ನೋವು ಗುಣವಾಗುತ್ತದೆ.

ಶುಂಠಿ ಕಷಾಯಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿದರೆ ಗಂಟಲು ನೋವು ಕಡಿಮೆಯಾಗುತ್ತದೆ.

ಕರಿಮೆಣಸಿನ ಕಾಳನ್ನು ಕಲ್ಲುಪ್ಪಿನ ಜೊತೆ ಬಾಯಲ್ಲಿ ಇಟ್ಟು ಚೀಪಿದರೂ ಗಂಟಲು ನೋವು ವಾಸಿಯಾಗುತ್ತದೆ.

ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಚೀಪಿದರೆ ಮಕ್ಕಳಲ್ಲಿ ಕಾಡುವ ಗಂಟಲು ನೋವು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *