WhatsApp Group Join Now

ನಿಮ್ಮೆಲರಿಗೂ ಸ್ವಾಗತ ಗಣೇಶ ಮೂರ್ತಿಯನ್ನು ತರುವಾಗ ಯಾವ ನಿಯಮಗಳನ್ನು ಪಾಲಿಸಬೇಕು? ಯಾವ ಯಾವ ಬಣ್ಣದ ಗಣಪತಿಯನ್ನು ಸ್ಥಾಪಿಸಿದರೆ ಏನು ಫಲ ಸಿಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿಗಾಗಿ ಗಣಪತಿಯನ್ನು ಪೂಜಿಸಲಾಗುತ್ತದೆ.ಗಣೇಶನ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಸ್ಥಾಪಿಸಬೇಕು? ಈ ಎಲ್ಲ ಮಾಹಿತಿಯನ್ನು ತಿಳಿಯೋಣ. ನಾವು ಕೈ ಹಿಡಿಯುವ ಕಾರ್ಯದಲ್ಲಿ ಜಯ ಒದಗಿಸುವ ವಿಘ್ನವಿನಾಶಕ ನಾದ ವಿನಾಯಕ ಅಗ್ರ ಪೂಜೆಗೆ ಪಾತ್ರನಾಗಿರುವ ಈ ವಿಘ್ನವಿನಾಶಕ ಗಣಪತಿಯನ್ನು ತರುವಾಗ ಯಾವ ನಿಯಮಗಳನ್ನು ಪಾಲಿಸಬೇಕು? ಗಣೇಶನ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಸ್ಥಾಪನೆ ಮಾಡಬೇಕು? ನೀವು ಗಣೇಶ ಮೂರ್ತಿಯನ್ನು ತರುವಾಗ ಅದು ಎಡಗಡೆ ಬಾಗಿದ ಸೊಂಡಿಲ ಗಣೇಶ ಮೂರ್ತಿ ಆಗಿರಬೇಕು. ಅಂತಹ ಗಣಪತಿಯನ್ನು ಪೂಜಿಸುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳು ಅತಿ ಶೀಘ್ರ ದಲ್ಲಿ ಇಡೇರುತ್ತವೆ. ಬಿಳಿ ಬಣ್ಣದ ಗಣೇಶ ಮೂರ್ತಿಯನ್ನು ಸ್ಥಾಪಿಸಿದರೆ ಯಶಸ್ಸು ಕೀರ್ತಿ ಸಿಗುತ್ತದೆ. ಹಾಗೆ ಕುಂಕುಮ ಅಥವಾ ಸಿಂಧೂರ ಬಣ್ಣದ ಗಣಪತಿಯನ್ನು ಸ್ಥಾಪಿಸಿದರೆ.

ವ್ಯಾಪಾರದಲ್ಲಿ ಉತ್ತಮ ಲಾಭಗಳು ದೊರೆಯುತ್ತವೆ. ನಿಂತಿರುವ ಗಣೇಶನನ್ನು ಪೂಜಿಸಿದರೆ ಕೆಲಸದಲ್ಲಿ ಯಶಸ್ಸು ಕೆಲಸ ಮಾಡಲು ಶಕ್ತಿ ಸಿಗುತ್ತದೆ. ಹಾಗೆ ಕುಳಿತುಕೊಂಡಿರುವ ಗಣೇಶನನ್ನು ಪೂಜಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಮೋದಕ ಮತ್ತು ಇಲಿಯೂ ಗಣೇಶನ ಮೂರ್ತಿಯಲ್ಲಿ ಇರಬೇಕು. ಅಂತಹ ಗಣೇಶನನ್ನು ಪೂಜಿಸಬೇಕು. ನೀವು ಗಣೇಶ ಮೂರ್ತಿಯನ್ನು ತರುವಾಗ ಇದನ್ನು ಗಮನಿಸಲೇಬೇಕು. ಹಾಗೆ ಪೂಜಾ ಸ್ಥಳದಲ್ಲಿ ಒಂದು ಗಣೇಶನನ್ನು ಇಟ್ಟು ಮಾತ್ರ ಪೂಜೆ ಮಾಡಬೇಕು. ಒಂದಕ್ಕಿಂತ ಹೆಚ್ಚು ಗಣೇಶನ್ನು ಸ್ಥಾಪನೆ ಮಾಡಬಾರದು. ಗಣೇಶನನ್ನು ಪೂಜಿಸುವಾಗ ಮರೆಯದೇ ಗರಿಕೆ ಹುಲ್ಲನ್ನು ಅರ್ಪಿಸಬೇಕು ಹಾಗೆ ಓಂ ಗಣಪತಿಯೇ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಸ್ವಸ್ತಿಕ್ ಚಿನ್ನೆಯು ಗಣೇಶ ದೇವನ ಚಿನ್ನೆಯಾಗಿದೆ. ಸ್ವಸ್ತಿಕ್ ಚಿನ್ನೆಯನ್ನು ಮನೆಗೆ ತಂದು ಪೂಜಿಸುವುದರಿಂದ ಮನೆಯಲ್ಲಿ ಏಳಿಗೆ ಸಿಗುತ್ತದೆ. ಹಾಗೆ ಗಣೇಶ ಮೂರ್ತಿಯನ್ನು ಪೂರ್ವ ದಿಕ್ಕಿಗೆ ಸ್ಥಾಪನೆ ಮಾಡಬೇಕು. ಸಾಧ್ಯವಾಗದವರು ದಕ್ಷಿಣ ದಿಕ್ಕನ್ನು ಬಿಟ್ಟು ಬೇರೆ ದಿಕ್ಕಿನಲ್ಲಿ ಸ್ಥಾಪನೆ ಮಾಡಬಹುದು.

ಇತರೆ ಗಣೇಶ ಮೂರ್ತಿಯನ್ನು ತರುವಾಗ ಈ ವಿಷಯ ನೆನಪಿಟ್ಟುಕೊಳ್ಳಿ. ಎಡಗಡೆ ಬಾಗಿದ ಸೊಂಡಿಲ ಗಣಪತಿ ಆಗಿರಬೇಕು. ಹಾಗೆ ಆ ಗಣೇಶ ಮೂರ್ತಿಯಲ್ಲಿ ಮೋದಕ ಮತ್ತು ಇಲಿ ಇರಬೇಕು.ಗಣೇಶ ಉತ್ಸವವನ್ನು ಸಾಮಾಜಿಕ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ ಏಕೆಂದರೆ ಈ ಹಬ್ಬವನ್ನು ಕುಟುಂಬ ಸದಸ್ಯರಲ್ಲಿ ಮಾತ್ರವಲ್ಲದೆ ಎಲ್ಲಾ ನೆರೆಹೊರೆಯವರೊಂದಿಗೆ ಆಚರಿಸಲಾಗುತ್ತದೆ. ಮನೆಗಳಲ್ಲದೆ, ಕಾಲೋನಿ ಮತ್ತು ನಗರದ ಎಲ್ಲಾ ಭಾಗಗಳಲ್ಲಿ ಗಣಪತಿಯನ್ನು ಸ್ಥಾಪಿಸಲಾಗಿದೆ. ವಿವಿಧ ರೀತಿಯ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತೆ, ಇದರಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗಣೇಶ ಉತ್ಸವದ ನೆಪದಲ್ಲಿ ಎಲ್ಲರಲ್ಲೂ ಒಗ್ಗಟ್ಟು ಮೂಡಿಸುತ್ತದೆ. ಗಣಪತಿಯ ಯಾವುದೇ ಪೂಜೆ, ಪೂಜೆ ಮತ್ತು ಆರತಿಯನ್ನು ಮೊದಲು ಮಾಡಲಾಗುತ್ತದೆ. ಆಗ ಮಾತ್ರ ಯಾವುದೇ ಪೂಜೆಯನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯನ್ನು ಸಂಕಟ ಚತುರ್ಥಿ ಎಂದೂ ಕರೆಯುತ್ತಾರೆ. ಹೀಗೆ ಮಾಡುವುದರಿಂದ ಜನರ ಸಮಸ್ಯೆಗಳು ದೂರವಾಗುತ್ತವೆ.

WhatsApp Group Join Now

Leave a Reply

Your email address will not be published. Required fields are marked *