WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಸ್ಮಶಾನ ವಾಸಿಯಾದ ಶಿವನನ್ನು ಅಭಿಷೇಕ ಪ್ರಿಯ ಎಂದು ಕರೆಯಲಾಗುತ್ತದೆ. ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುವ ಈ ದೇವನಿಗೆ ಹೆಚ್ಚಿನ ಶಿವಾಲಯಗಳಲ್ಲಿ ಕ್ಷೀರ ಅಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಗಳನ್ನ ಮಾಡುತ್ತಾರೆ, ಆದ್ರೆ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಪರಮೇಶ್ವರನಿಗೆ 108 ಗಿಡ ಮೂಲಿಕೆಗಳ ರಸದಿಂದ ಅಭಿಷೇಕ ಮಾಡುತ್ತಾರಂತೆ. ಬನ್ನಿ ಹಾಗಾದರೆ ಈ ತರಹದ ವಿಶಿಷ್ಟ ಆಚರಣೆ ಇರುವ ಶಿವನ ದೇವಸ್ಥಾನ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಂಡು ಬರೋಣ. ಸಿಂಗಟಗೆರೆ ಎಂಬ ಊರಿನ ಪ್ರಶಾಂತವಾದ ವಾತಾವರಣದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ನೆಲೆ ನಿಂತು ತನ್ನ ಬಳಿ ಬರುವ ಭಕ್ತರನ್ನು ಉದ್ದರಿಸುತ್ತ ಇದ್ದಾನೆ. ಈ ಕ್ಷೇತ್ರದಲ್ಲಿ ಇರುವ ಸ್ವಾಮಿಯ ಲಿಂಗವು ಉದ್ಭವ ಲಿಂಗ ಆಗಿದ್ದು, ವರ್ಷದ 350 ದಿನವೂ ಇಲ್ಲಿರುವ ಸ್ವಾಮಿಗೆ ರುದ್ರಾಭಿಷೇಕ ವನ್ನಾ ಸಲ್ಲಿಸಲಾಗುತ್ತದೆ. ಇಲ್ಲಿ ನೆಲೆಸಿರುವ ಕಲ್ಲೇಶ್ವರ ಸ್ವಾಮಿಯು ಪ್ರಸನ್ನ ಕಲ್ಲೇಶ್ವರ ಎಂಬ ಹೆಸರಿನಿಂದ ಪೂಜೆ ಗೊಳ್ಳುತ್ತಿದ್ದು, ಹೊಯ್ಸಳರ ದೊರೆ ವೀರ ಬಲ್ಲಾಳ ನು ನಿರ್ಮಿಸಿದ್ದ ಈ ದೇವಾಲಯವನ್ನು ಸ್ವಲ್ಪ ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ. ದೇಗುಲದ ಹಿಂದೆ ಇರುವ ಕೆರೆಯನ್ನು ಸಿಂಗಳರಾಯ ಎಂಬುವವರು ಕಟ್ಟಿಸಿದ್ದು ಆತನ ಸ್ಮರಣಾರ್ಥ ಈ ಊರಿಗೆ ಸಿಂಗಟಗೆರೆ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಪರಮೇಶ್ವರನ ಜೊತೆ ಪಾರ್ವತಿ ಅಮ್ಮನವರು ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲಾಗುತ್ತದೆ. ಇಲ್ಲಿ ನೆಲೆಸಿರುವ ಪರಮೇಶ್ವರನು ಅಪ್ಪಣೆಯನ್ನು ನೀಡುವ ಮುಖಾಂತರ ಭಕ್ತರು ಮನದಲ್ಲಿ ಅಂದುಕೊಂಡ ಕಾರ್ಯಗಳು ಸಿದ್ಧಿ ಆಗು ತ್ತೋ ಇಲ್ಲವೋ ಎಂದು ಸೂಚನೆಯನ್ನು ನೀಡುತ್ತಾನೆ. ಮಕ್ಕಳು ಇಲ್ಲದವರಿಗೆ ಮಕ್ಕಳ ಭಾಗ್ಯ ಉದ್ಯೋಗ ಇಲ್ಲದವರಿಗೆ ಉದ್ಯೋಗ ಭಾಗ್ಯ ಈ ಸ್ವಾಮಿ ಕರುಣಿಸುತ್ತಾನೆ. ಇನ್ನೂ ಸಾಕಷ್ಟು ಮಂದಿ ಇಷ್ಟಾರ್ಥ ಸಿದ್ಧಿಗಾಗಿ ರುದ್ರಾಭಿಷೇಕ ವನ್ನಾ ಮಾಡುವುದಾಗಿ ಹರಕೆ ಹೊತ್ತು ಕೊಳ್ಳುತ್ತಾರೆ.

ಏನೇ ಸಮಸ್ಯೆ ಹೊತ್ತು ತಂದರೂ ಕಲ್ಲೇಶ್ವರ ಸ್ವಾಮಿಯು ಆ ಕಷ್ಟಗಳನ್ನು ಪರಿಹರಿಸು ತ್ತನೇ ಎಂಬುದು ಈ ದೇವರನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ. ಇನ್ನೂ ಪ್ರತಿ ವರ್ಷವೂ ಈ ದೇಗುಲದಲ್ಲಿ ಬುದ್ಧ ಪೂರ್ಣಿಮೆ ಅಂದು ಕಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸುಮಾರು 11 ದಿನಗಳ ಕಾಲ ಜಾತ್ರಾ ಮಹೋತ್ಸವ ವನ್ನಾ ಆಚರಿಸುವ ಈ ಊರಿನಲ್ಲಿ ಜಾತ್ರೆ ಮುಗಿಯುವ ವರೆಗೆ ಯಾರೋ ಕೂಡ ಪಾದರಕ್ಷೆಗಳನ್ನು ಹಾಕುವುದಿಲ್ಲ. ಜಾತ್ರೆಗೆ ಬಂದೋಬಸ್ತ್ ಮಾಡಲು ಬಂದ ಪೊಲೀಸರು ಕೂಡ ಪಾದರಕ್ಷೆಗಳನ್ನು ಧರಿಸದೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಇಷ್ಟೇ ಅಲ್ಲದೆ ಹೊರ ಊರಿನ ಜನ ಇಲ್ಲಿನ ಜಾತ್ರೆಗೆ ಆಗಮಿಸುವ ಭಕ್ತರು ಕೂಡ ಊರ ಹೊರಗಡೆ ಪಾದರಕ್ಷೆಗಳನ್ನು ಬಿಟ್ಟು ಬಂದು ದೇವರ ದರ್ಶನ ಮಾಡುತ್ತಾರೆ. ಪಾದರಕ್ಷೆಯನ್ನು ಹಾಕಿಕೊಂಡು ದೇವರ ದರ್ಶನಕ್ಕೆ ಬಂದರೆ ಕಲ್ಲೇಶ್ವರ ಸ್ವಾಮಿಗೆ ಅಪಚಾರ ಮಾಡಿದ ಹಾಗೆ ಆಗುತ್ತದೆ ಎಂಬ ಮನೋಭಾವನೆ ಇಂದಾಗಿ ಈ ಊರಿನ ಗ್ರಾಮಸ್ಥರು ಹಾಗೂ ಈ ದೇವರ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಪಾದರಕ್ಷೆಗಳನ್ನು ಧರಿಸದೆ ಬರಿ ಕಾಲಿನಲ್ಲಿ ಬಂದು ದೇವರ ದರ್ಶನ ಮಾಡುತ್ತಾರೆ. ಇಂತಹ ಅಪರೂಪದ ಆಚರಣೆಯನ್ನು ನಾವು ನೋಡೋಕೆ ಸಿಗೋದು ಬಹಳ ವಿರಳ ಎಂದೇ ಹೇಳಬಹುದು. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಸಿಂಗಟಗೆರೆಯ ಸುತ್ತ ಮುತ್ತಲಿನ ಏಳು ಹಳ್ಳಿಯ ಗ್ರಾಮಸ್ಥರು ಜಾತ್ರೆ ಆರಂಭವಾದ ದಿನದಿಂದ ಜಾತ್ರೆಯ ಕೊನೆಯ ದಿನದ ವರೆಗೂ ಒಕ್ಕಲುತನ ಮಾಡುವುದಿಲ್ಲ ಅಲ್ಲದೆ ಎತ್ತುಗಳನ್ನು ಬೇಸಾಯಕ್ಕೆ ಹೂಡೋದಿಲ್ಲ ಎಂಬುದು ಈ ಕ್ಷೇತ್ರದ ವಿಶೇಷತೆ ಗಳಲ್ಲಿ ಒಂದಾಗಿದೆ. ಅಲ್ಲದೆ ಯಾವುದೇ ಜಾತಿ ಮತ ಭೇದವಿಲ್ಲದೆ ಸಾವಿರಾರು ಮಂದಿ ಭಾಗವಹಿಸುವ ಕಲ್ಲೇಶ್ವರ ಸ್ವಾಮಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ವಾಸವಾಗಿರುವ ಮಾಂಸಾಹಾರ ತಿನ್ನುವ ಜನರು ಯಾವುದೇ ಕಾರಣಕ್ಕೂ ಮನೆಗಳಲ್ಲಿ ಅಥವಾ ಊರ ಹೊರಗೆ ಮಾಂಸವನ್ನು ಸೇವಿಸುವುದಿಲ್ಲ.

ಅಲ್ಲದೆ ಇಲ್ಲಿನ ಜನರು ಕಲ್ಲೇಶ್ವರ ಸ್ವಾಮಿ ದಿನವೆಂದು ಕರೆಯುವ ವರ್ಷದ ಯಾವುದೇ ಸೋಮವಾರ ಕೂಡ ಮಾಂಸದ ಅಡುಗೆಯನ್ನು ಊಟಾ ಮಾಡುವುದಿಲ್ಲ. ಈ ಪದ್ಧತಿಗಳನ್ನು ತಲತಲಾತರದಿಂದ ಪಾಲಿಸಿಕೊಂಡು ಬರುತ್ತಾ ಇರುವುದು ಕಲ್ಲೇಶ್ವರ ಸ್ವಾಮಿ ಮೇಲಿನ ಭಕ್ತಿ ಹಾಗೂ ಶ್ರದ್ಧೆಗೆ ಹಿಡಿದ ಕೈಗನ್ನಡಿಯಾಗಿದೆ. ಅಮಾವಾಸ್ಯೆ ಹಾಗೂ ಸೋಮವಾರ ಗಳಂದೂ ವಿಶೇಷ ಪೂಜೆ ಗೊಳ್ಳುವ ಇಲ್ಲಿನ ಕಲ್ಲೇಶ್ವರ ಸ್ವಾಮಿಗೆ 108 ಗಿಡ ಮೂಲಿಕೆಗಳ ರಸದಿಂದ ಅಭಿಷೇಕ ಸಲ್ಲಿಸಲಾಗುತ್ತದೆ. ಅಮಾವಾಸ್ಯೆ ದಿನಗಳಂದು ಬರೋಬ್ಬರಿ ಒಂದರಿನ ಐದು ಸಾವಿರ ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಕಾರ್ತಿಕ ಮಾಸ, ಶ್ರಾವಣ ಮಾಸ, ಶಿವರಾತ್ರಿ ಹಬ್ಬಗಳಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಧನುರ್ಮಾಸದ 30 ದಿನಗಳು 30 ಬಗೆಯ ಅಲಂಕಾರ ಮಾಡಲಾಗುತ್ತದೆ ಈ ಸಮಯದಲ್ಲಿ ಬಗೆ ಬಗೆಯ ಅಲಂಕಾರ ಗಳಿಂದ ಶೋಭಾಯಮಾನವಾದ ಸ್ವಾಮಿಯನ್ನು ನೋಡುವುದೇ ಬದುಕಿನ ಸುಕೃತ ಆಗಿದೆ. ಬೇಡಿ ಬಂದ ಭಕ್ತರನ್ನು ಪೊರೆಯುವ ಪ್ರಸನ್ನ ಕಲ್ಲೇಶ್ವರ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಇದ್ದು, ದೇಗುಲಕ್ಕೆ ದೂರದ ಊರಿನಿಂದ ಭೇಟಿ ನೀಡುವ ಭಕ್ತರಿಗೆ ಅತಿಥಿ ಗೃಹಗಳ ವ್ಯವಸ್ಥೆ ಇರುತ್ತದೆ. ಈ ದೇಗುಲದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8722335807 ಈ ದೂರವಾಣಿ ಸಂಖ್ಯೆ ಗೆ ಕರೆ ಮಾಡಿ. ಪ್ರಸನ್ನ ಕಲ್ಲೇಶ್ವರ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಿಂಗಟಗೆರೆ ಎಂಬ ಊರಿನಲ್ಲಿ ಇದೆ. ಈ ಪುಣ್ಯ ಕ್ಷೇತ್ರವೂ ಚಿಕ್ಕಮಗಳೂರಿನಿಂದ 62 ಕಿಮೀ, ಕಡೂರಿನಿಂದ 22 ಕಿಮೀ, ದೂರದಲ್ಲಿದೆ. ಕಡೂರು ಈ ದೇಗುಲಕ್ಕೆ ಸಮೀಪ ಇರುವ ರೈಲ್ವೇ ನಿಲ್ದಾಣ ಆಗಿದೆ. ಸಾಧ್ಯವಾದರೆ ಇಷ್ಟೊಂದು ವಿಶೇಷತೆಗಳು ಇರುವ ಈ ಸ್ವಾಮಿಯನ್ನು ದರ್ಶನ ಮಾಡಿ ಪುನೀತ ರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *