WhatsApp Group Join Now

ನಮಸ್ತೆ ಪ್ರಿಯ ಓದುಗರೇ, ನಾವು ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ಕೊಳಗಳನ್ನು ಕೂಡ ದರ್ಶನ ಮಾಡಿ ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಬರ್ತೀವಿ ಅಲ್ವಾ? ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಪುಟ್ಟದಾದ ತೀರ್ಥ ಕೊಳವನ್ನು ನಿರ್ಮಾಣ ಮಾಡಿರುತ್ತಾರೆ. ಆದ್ರೆ ನಾವು ಇಂದಿನ ಲೇಖನದಲ್ಲಿ ಪರಿಚಯಿಸಲು ಹೊರಟಿರುವ ಕೊಳದ ಬಳಿ ನೀವು ಮನಸಿನಲ್ಲಿ ಅಂದುಕೊಂಡ ಕಾರ್ಯ ಸಿದ್ಧಿ ಆಗುತ್ತೋ ಇಲ್ಲವೋ ಎಂದು ಪ್ರಶ್ನೆ ಕೇಳಿದರೆ ಇಲ್ಲಿನ ಮಾಯಾ ಕೊಳವು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತೆ ಅಂತೆ. ನಿಜವಾಗಲೂ ಈ ತರಹದ ಕೊಳ ಇದಿಯ? ಎಂದು ಯೋಚಿಸುವವ ರಿ ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ. ಬನ್ನಿ ಹಾಗಾದರೆ ಆ ಸ್ಥಳ ಯಾವುದು ಅಲ್ಲಿನ ಸ್ಥಳ ಮಹಾತ್ಮೆ ಏನು ಎಂಬುದನ್ನು ತಿಳಿದುಕೊಂಡು ಬರೋಣ. ಮಲೆನಾಡು ಎಂದರೆ ಹಚ್ಚ ಹಸುರಿನ ಸ್ವರ್ಗ ಇಲ್ಲಿನ ಮಳೆಗಾಲ, ಉಕ್ಕಿ ಹರಿಯುವ ನದಿ, ವಿಶ್ವ ಪ್ರಸಿದ್ಧ ಜೋಗ ಜಲಪಾತ, ದಟ್ಟವಾದ ಕಾಡು, ಚಳಿಗಾಲದಲ್ಲಿ ಸುರಿಯುವ ಮಂಜು, ಹೀಗೆ ಪ್ರಕೃತಿಯ ಸೌಂದರ್ಯದ ಗಣಿ ಆಗಿರುವ ಮಲೆನಾಡು ಅನೇಕ ವಿಶಿಷ್ಟ ದೇವಸ್ಥಾನಗಳ ತವರೂರು ಕೂಡ ಹೌದು. ಮಲೆನಾಡಿನ ಸುಂದರವಾದ ಅಡಿಕೆ ತೋಟಗಳ ಮಧ್ಯೆ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೇ ಗುಬ್ಬಿಗಳ ಗ್ರಾಮದಲ್ಲಿ ಇರುವ ಈ ಗುಳಿ ಗುಳಿ ಶಂಕರ ಸ್ವಾಮಿ. ಈ ದೇವಾಲಯ ಪುಟ್ಟದಾಗಿದ್ದು, ಇದರ ಮಹಿಮೆ ಅಪಾರ. ಇಲ್ಲಿರುವ ಮಾಯಾ ಕೊಳವನ್ನು ಚಪ್ಪಾಳೆ ಕೊಳ, ನೀರ್ಗುಳ್ಳೆ ಕೊಳ, ಗೌರಿ ತೀರ್ಥ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ.

ಇಲ್ಲಿನ ಕೊಳದ ತಟದಲ್ಲಿ ನಿಂತು ಚಪ್ಪಾಳೆ ಹೊಡೆದರೆ ಕೊಳದ ನೀರು ಗುಳ್ಳೆ ಗುಳ್ಳೆ ಆಗಿ ಮೇಲೆ ಬರುತ್ತೆ. ಹೀಗಾಗಿ ಈ ಕೊಳಕ್ಕೆ ಚಪ್ಪಾಳೆ ಕೊಳ ಎಂದು ಹೇಳಲಾಗುತ್ತದೆ. ಈ ಕೊಳದ ನೀರಿನಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಇದ್ದು, ಈ ನೀರನ್ನು ಕುಡಿದರೆ ಚರ್ಮ ರೋಗ ಸಮಸ್ಯೆ, ಕಿಡ್ನಿ ಸ್ಟೋನ್ ಸಮಸ್ಯೆ, ಮತ್ತು ಶೀತದ ಸಮಸ್ಯೆ ದೂರವಾಗುತ್ತದೆ ಎನ್ನುವುದು ಈ ನೀರನ್ನು ಕುಡಿದು ತಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಿದ ಭಕ್ತರ ಅಭಿಪ್ರಾಯ ಆಗಿದೆ. ಸ್ನೇಹಿತರೆ , ಈ ಕೊಳದ ಮತ್ತೊಂದು ವಿಶೇಷತೆ ಏನೆಂದರೆ, ಯಾವುದೇ ಎಲೆ ಹಾಕಿದ್ರೂ ಆ ಎಲೆಗಳು ನೀರಿನ ಮೇಲೆ ತೇಲುತ್ತವೆ, ಆದ್ರೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಹಾಕಿದ್ರೆ ಅದು ಮುಳುಗುತ್ತದೆ. ನಿಮ್ಮ ಮನಸಿನಲ್ಲಿ ಅಂದುಕೊಂಡ ಕಾರ್ಯ ಸಿದ್ಧಿ ಆಗುತ್ತೋ ಇಲ್ಲವೋ ಎಂದು ಈ ಕೊಳದ ಮೂಲಕ ನಾವು ಉತ್ತರವನ್ನು ಪಡೆಯಬಹುದು. ಮನಸ್ಸಿನ ಕಾರ್ಯ ಸಿದ್ಧಿ ಆಗುತ್ತೋ ಇಲ್ಲವೋ ಎಂದು ತಿಳಿಯಬೇಕಾದರೆ, ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಭಕ್ತಿಯಿಂದ ಪ್ರಾರ್ಥಿಸಿ ಕೊಳದಲ್ಲಿ ಹಾಕಬೇಕು, ಬಿಲ್ವಪತ್ರೆಯು ಮುಳುಗಿ 20 ನಿಮಿಷಗಳ ಬಳಿಕ ಮೇಲೆದ್ದು ಬಂದ್ರೆ ನಮ್ಮ ಮನದ ಕೋರಿಕೆಗಳು ಸಿದ್ಧಿ ಆಗುತ್ತೆ ಎಂದು, ಬಿಲ್ವಪತ್ರೆ ಮುಳುಗದೆ ಹೋದರೆ ಇಷ್ಟಾರ್ಥ ಸಿದ್ಧಿ ಆಗುವುದಿಲ್ಲ ಎಂದು. ಪ್ರತಿನಿತ್ಯ ನೂರಾರು ಮಂದಿ ಇಲ್ಲಿಗೆ ಬಂದು ಈ ವಿಚಿತ್ರ ವಿಸ್ಮಯವನ್ನು ಕಣ್ಣು ತುಂಬಿಕೊಂಡು ಹೋಗುತ್ತಾರೆ. ಇಲ್ಲಿ ನಡೆಯುವ ಪ್ರತಿ ವಿಸ್ಮಯಗಳ ಹಿಂದೆ ಕೊಳದ ಒಳಗಿರುವ ಶಿವನ ಲಿಂಗವೇ ಕಾರಣ ಎಂಬುದು ಇಲ್ಲಿಗೆ ಬರುವ ಭಕ್ತಾದಿಗಳ ಮನದ ಮಾತಾಗಿದೆ.

ಇನ್ನೂ ಈ ಕ್ಷೇತ್ರದಲ್ಲಿ ಪರಮೇಶ್ವರನು ಕೊಳದ ಒಳಗೇ ಬಂದು ನೆಲೆ ನಿಲ್ಲುವು ದರ ಹಿಂದೆ ಒಂದು ಕಥೆ ಕೂಡ ಇದೆ. ಒಮ್ಮೆ ಪಾರ್ವತಿ ಪರಮೇಶ್ವರರು ಪ್ರಕೃತಿ ಸೌಂದರ್ಯ ಸವಿಯುತ್ತಾ ಈ ಸ್ಥಳಕ್ಕೆ ಬರುತ್ತಾರೆ. ಇಲ್ಲಿಗೆ ಬಂದಾಗ ಶಿವನಿಗೆ ವಿಪರೀತವಾದ ಬಾಯಾರಿಕೆ ಉಂಟಾಗುತ್ತದೆ. ಹತ್ತಿರದಲ್ಲಿ ಎಲ್ಲೋ ನೀರು ಸಿಗುವುದೇ ಇಲ್ಲ. ಆಗ ಶಿವನು ತನ್ನ ಜಟೆಯಲ್ಲಿ ಇದ್ದ ಗಂಗೆಯನ್ನು ಈ ಜಾಗದಲ್ಲಿ ಇಳಿಯುವಂತೆ ಕೇಳಿಕೊಳ್ಳುತ್ತಾನೆ. ಗಂಗಾ ಮಾತೆಯು ಶಿವನ ಅಣತಿ ಅಂತೆ ಈ ಸ್ಥಳದಲ್ಲಿ ಬಂದು ಶಿವನ ಬಾಯಾರಿಕೆಯನ್ನು ನೀಗಿಸುತ್ತಾಳೆ. ನಂತರ ಪರ ಶಿವನು ದೇವಿಯೇ ನೀನು ಇದೆ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸಿ ನಿನ್ನಲ್ಲಿರುವ ಔಷಧೀಯ ಗುಣಗಳಿಂದ ಭೂಮಿಯ ಜೀವ ಕೋಟಿಯನ್ನು ಉದ್ಧರಿಸು ಎಂದು ಹರಸುತ್ತಾರೆ. ಆಗ ಗಂಗೆಯು ದೇವ ನೀವು ಕೂಡ ನನ್ನ ಜೊತೆ ಇಲ್ಲಿ ಬೆಳೆಸುವುದಾದರೆ ಮಾತ್ರ ನಾನು ಈ ಸ್ಥಳದಲ್ಲಿ ನೆಲೆಸುತ್ತೇನೆ. ಇಲ್ಲವಾದರೆ ನಿಮ್ಮ ಜಟೆಯಲ್ಲಿ ಉಳಿದುಬಿಡು ತ್ತೇನೆ ಎಂದು ಹೇಳಿದರ ಫಲವಾಗಿ ಗಂಗಾ ಮಾತೆಯು ಐಕ್ಯವಾಗಿ ಈ ಸ್ಥಳದಲ್ಲಿ ಲಿಂಗ ರೂಪಿಯಾಗಿ ನೆಲೆ ನಿಂತ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಅಷ್ಟೇ ಕೊಳದ ಸಮೀಪ ಶಿವನ ಪುಟ್ಟದಾದ ದೇಗುಲ ನಿರ್ಮಾಣ ಮಾಡಿದ್ದು, ಶಿವನ ಎದುರು ನಂದಿಯನ್ನು ಪ್ರತಿಷ್ಠಾಪಿಸ ಲಾಗಿದೆ. ಇಲ್ಲಿರುವ ವಿಸ್ಮಯಕಾರಿ ಕೊಳವನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ಶಂಕರೇಷ್ವರ ದೇವರಿಗೆ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮುಂತಾದ ಸೇವೆಗಳನ್ನು ಮಾಡಿಸಬಹುದು. ಈ ಪುಣ್ಯ ಕ್ಷೇತ್ರವೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿಗ ಎಂಬ ಕ್ಷೇತ್ರದಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ನಿಮ್ಮ ಕಾರ್ಯ ಸಿದ್ಧಿಯ ಪ್ರಶ್ನೆಗಳ ಕೇಳಲು ಈ ದಿವ್ಯ ಕ್ಷೇತ್ರ ಕೆ ಆಗಮಿಸಿ ಶಿವನ ಅನುಗ್ರಹ ಪಡೆಯಿರಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *