WhatsApp Group Join Now

ಸ್ನೇಹಿತರೆ ರಾಜಕಾರಣಿಗಳು ಸಮಾಜ ಸೇವೆ ಮಾಡುತ್ತೀವಿ ಅಂತ ಕೆಲವರಿಗೆ ಕೆಲವು ವಸ್ತುಗಳು ಊಟ ತಿಂಡಿ ಕೊಟ್ಟು ಫೋಟೋಗೆ ಕ್ಯಾಮೆರಾ ಗೆ ಪೋಸ್ ಕೊಡುವುದನ್ನು ನಾವು ನೀವು ನೋಡುತ್ತೇವೆ ಕೇಳಿದ್ದೇವೆ ಆದರೆ ಎಲ್ಲರಿಗಿಂತ ವಿಭಿನ್ನವಾಗಿ ತುಂಬಾ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿರುವ ಮಹಿಳೆ ಒಬ್ಬರ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ನಿಮಗೆಲ್ಲ ಮಾಹಿತಿ ಕೊಡುತ್ತೇವೆ ಇವರ ಹೆಸರು ಸಿಂಧು ಬೇರೆಯವರಿಗಾಗಿ ತನ್ನ ಜೀವನ ಮುಡುಪಾಗಿರುವ ಇವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ ಸಿಂಧು ಹುಟ್ಟಿದಾಗಿನಿಂದ ಬರಿ ಬಡತನ ಅನುಭವಿಸಿದ್ದರು.

ಕಷ್ಟ ಬಿಟ್ಟು ಬೇರೆ ಏನು ಇವರಿಗೆ ಗೊತ್ತಿಲ್ಲ ಬಡತನ ಕಾರಣದಿಂದ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿಬಿಟ್ಟರು ನಾಲ್ಕನೇ ಕ್ಲಾಸ್ ಮಾತ್ರ ಓದಿದರು ಅಕ್ಕದ ಪಕ್ಕದ ಮನೆ ಮಕ್ಕಳು ಖುಷಿಯಾಗಿ ಆಟವಾಡುತ್ತಾ ಇದ್ದರೆ ಸಿಂಧು ಅವರು ಹಸಿವಿನಿಂದ ಮಲಗುತ್ತಿದ್ದರು ಇವರು ಚಿಕ್ಕ ವಯಸ್ಸಿನಿಂದ ಸಿಂಧು ಕಿತ್ತು ತಿಂದಿದ್ದು ಆದರೆ ಸಿಂಧು ಅವರಿಗೆ 12 ವರ್ಷ ವಯಸ್ಸಾದಾಗ ಮದುವೆ ಮಾಡಿಬಿಟ್ಟರು ಇದಕ್ಕೆ ಕಾರಣ ಅದೇ ಒಂದು ಬಡತನ ಹುಡುಗನಿಗೆ ಆಗ 32 ವರ್ಷ ಬೇರೆ ದಾರಿ ಇಲ್ಲದೆ ತಾರಾ ಗಿಂತ 20 ವರ್ಷ ದೊಡ್ಡವನ ಜೊತೆ ಸಿಂಧು ಮದುವೆ ಮಾಡಿಕೊಂಡರು ಮೂರು ಜನ ಮಕ್ಕಳು ಜನಿಸಿದರು.

ಮೂರನೇ ಮಗು ಹುಟ್ಟುವ ಕೆಲವು ದಿನಗಳ ಹಿಂದೆ ಸಿಂಧು ಅವರನ್ನು ಬಿಟ್ಟು ಗಂಡ ಹೊರಟು ಹೋದ ಹೆತ್ತವರು ಸಹಾಯ ಮಾಡಲಿಲ್ಲ ಆದರೂ ಮೂರು ಮಕ್ಕಳು ಸಾಕಲು ಪಡೆಬಾರದ ಕಷ್ಟವನ್ನು ಪಟ್ಟರು ಒಂದು ಹಂತದಲ್ಲಿ ಮಕ್ಕಳ ಊಟಕ್ಕಾಗಿ ಸಿಂಧು ಭಿಕ್ಷೆ ಕೂಡ ಇಟ್ಟಿದ್ದಾರೆ ಒಂದೊಂದು ದಿನವೂ ಭಿಕ್ಷೆ ಬಿಡಿ ದಿನಸಿ ತಂದು ಮಕ್ಕಳಿಗೆ ಊಟ ಮಾಡಿಸಿ ರಾತ್ರಿ ಮಲಗುವಾಗ ಕಣ್ಣೀರು ಹಾಕದ ರಾತ್ರಿ ಇಲ್ಲ ಇದೇ ಕಣ್ಣೀರು ಸಿಂಧು ಅವರಿಗೆ ಶಕ್ತಿ ಕೊಟ್ಟಿದೆ ಮನೆಯಲ್ಲಿ ಬರೀ ನೋವು ಸುತ್ತಿಕೊಂಡಿತ್ತು ಭಿಕ್ಷೆ ಎತ್ತು ಕಷ್ಟಗಳು ಅನುಭವಿಸಿದ್ದು ಸಿಂಧು ಅವರಿಗೆ ತುಂಬಾ ದುಃಖ ಉಂಟು ಮಾಡುತ್ತಿದ್ದು ತನ್ನ ರೀತಿಯ ಕಷ್ಟ ಬೇರೆ ಯಾರಿಗೂ ಬರಬಾರದು ಎಂದು ಸಿಂಧು ತೀರ್ಮಾನ ಮಾಡಿದ್ದರು.

ಇನ್ನು ತಮಗಾಗಿ ಎಲ್ಲಾ ಅನಾಥ ಮಕ್ಕಳಿಗೆ ಬದುಕಬೇಕು ಅಂತ ಸಿಂಧು ಅವರು ನಿರ್ಧರಿಸಿದರು ಕಷ್ಟ ಆಗಬಾರದು ಆ ರೀತಿ ಅವರನ್ನು ನೋಡಿಕೊಳ್ಳಬೇಕು ಎಂದು ತೀರ್ಮಾನಿಸಿದರು ಒಂದು ಅನಾಥ ಮಕ್ಕಳ ಆಶ್ರಮ ಶುರು ಮಾಡಿದರು ಸ್ವಲ್ಪ ಕಷ್ಟವಾದರೂ ಆಮೇಲೆ ಆಶ್ರಮ ಪ್ರಸಿದ್ಧವಾಯಿತು ಸಿದ್ದು ತಾಯಿ ನೋಡಿಕೊಳ್ಳುತ್ತಿದ್ದಾರೆ ಎಲ್ಲರೂ ಗಮನಿಸಿದ್ದಾರೆ ಕೆಲವೇ ತಿಂಗಳಲ್ಲಿ ನೂರಾರು ಅನಾಥ ಮಕ್ಕಳಿಗೆ ತಾಯಿಯಾಗಿದ್ದಾರೆ ತನ್ನ ಜೀವನ ಎಲ್ಲವೂ ಅನಾಥ ಮಕ್ಕಳಿಗಾಗಿ ಸಿಂಧು ತಾಯಿ ಅರ್ಪಿಸಿದರು ತನ್ನ ಆಶ್ರಮಕ್ಕೆ ಬರುವವರಿಗೆ ತಾಯಿ ರೀತಿ ಸಿಂಧು ತಾಯಿಯವರು ನೋಡಿಕೊಳ್ಳುತ್ತಾರೆ.

27 ಮತ್ತು ಸಾವಿರ ಮಕ್ಕಳು ಸಿಂಧು ತಾಯಿ ಆಶ್ರಮದಲ್ಲಿ ಖುಷಿಯಾಗಿ ಜೀವನ ಮಾಡುತ್ತಿದ್ದಾರೆ ಸಿಂಧು ದತ್ತು ಪಡೆದ ಮಕ್ಕಳಲ್ಲಿ ಹಲವರು ಈಗ ಡಾಕ್ಟರ್ ಗಳು ಇಂಜಿನಿಯರ್ ಗಳು ಆಗಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದಾರೆ ಸಿಂಧು ಅವರ ಜೀವನ ಕಥೆಯನ್ನು ಮರಾಠಿ ಭಾಷೆಯಲ್ಲಿ ವರ ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ ಕಷ್ಟ ಬಂತು ಅಂತ ಜೀವನ ಹೆದರಬಾರದು ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಮುಂದಕ್ಕೆ ಹೋಗಬೇಕು ಎಂಬ ಸಂದೇಶವನ್ನು ಈ ಸಿನಿಮಾದಲ್ಲಿ ಸಮಾಜಕ್ಕೆ ನೀಡಲಾಗಿತ್ತು.

WhatsApp Group Join Now

Leave a Reply

Your email address will not be published. Required fields are marked *