ನಮಸ್ತೆ ಪ್ರಿಯ ಓದುಗರೇ, ಮಾರುತಿ ಆಂಜನಿಪುತ್ರ, ವಾಯುಪುತ್ರ, ಪಿಂಗಳಕ್ಷ, ಹನುಮಂತ, ವಜ್ರದೇಹಿ ಎಂಬೆಲ್ಲ ಹೆಸರಿನಿಂದ ಕರೆಯೂ ರಾಮನ ಬಂಟ ನಾದ ಆಂಜನೇಯ ಸ್ವಾಮಿಯನ್ನು ನಂಬಿದ್ರೆ ಬದುಕಿನ ಬವಣೆಗಳು ಎಲ್ಲವೂ ಮಂಜಿನಂತೆ ದೂರವಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಬೇಡಿ ಬಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತೀರುವ ಶಮನೂರಿನ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಪುನೀತರಾಗೋಣ. ಶಾಮನೂರುರಿನಲ್ಲಿ ಸುಮಾರು ಎಂಟು ನೂರು ವರ್ಷಗಳಷ್ಟು ಪುರಾತನವಾದ ಆಂಜನೇಯ ಸ್ವಾಮಿಯ ದೇವಸ್ಥಾನ ಇದ್ದು, ಈ ಆಲಯದ ಗೋಪುರದ ಹೊರಗಡೆ ಸುಮಾರು 6 ಅಡಿ ಎತ್ತರದ ಮಾರುತಿಯ ವಿಗ್ರಹವನ್ನು ಸುಂದರವಾಗಿ ಚಿತ್ರಿಸಲಾಗಿದೆ. ರಾಮ ಲಕ್ಷ್ಮಣರನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ಈ ಸ್ವಾಮಿಯನ್ನು ವರ್ಣಲಂಕೃತವಾದ ಮೂರ್ತಿಯನ್ನು ನೋಡುತ್ತಾ ದೇಗುಲವನ್ನು ಪ್ರವೇಶಿಸಿದರೆ, ನಮಗೆ ಅರಿವಿಲ್ಲದೆ ಭಕ್ತಿಯ ಸಿಂಚನ ಆಗುತ್ತೆ. ಈ ಭವ್ಯ ಆಲಯವು ಗೋಪುರ, ಸುಂದರವಾದ ಗರ್ಭಗೃಹ ಹಾಗೂ ವಿಶಾಲವಾದ ಪ್ರದಕ್ಷಿಣಾ ಪಥ ವನ್ನೂ ಒಳಗೊಂಡಿದೆ. ದೇಗುಲದ ಗರ್ಭ ಗುಡಿಯೊಳಗೆ ಆಂಜನೇಯ ಸ್ವಾಮಿಯು ಕೈಯಲ್ಲಿ ಅಭಯ ಹಸ್ತ ಇನ್ನೊಂದು ಕೈಯಲ್ಲಿ ಗದೆಯನ್ನು ಹಿಡಿದುಕೊಂಡು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.
ಈ ಸ್ವಾಮಿಯ ಮುಂದೆ ನಿಂತು ಭಕ್ತಿಯಿಂದ ಬೇಡಿಕೊಂಡರೆ ಸಕಲ ಕಷ್ಟಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಶನಿವಾರದಂದು ಈ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶನಿವಾರದ ದಿನ ಹನುಮ ಭಕ್ತರು ಬಂದು ಸ್ವಾಮಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ ಕೃತಾರ್ಥ ರಾಗುತ್ತಿದ್ದಾರೆ. ಇನ್ನೂ ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಮಹಾ ಶಿವರಾತ್ರಿಯ ನಂತರ ಬರುವ ದಶಮಿಯಂದು ದೇವರ ಜಾತ್ರಾ ಮಹೋತ್ಸವವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಇಲ್ಲಿನ ರಥೋತ್ಸವಕ್ಕೆ ರಾಜ್ಯದ ಹಲವಾರು ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ದೇವರಿಗೆ ಅರ್ಪಿಸುತ್ತಾರೆ. ಜಾತ್ರೆಯ ಮೊದಲ ದಿನ ರಥೋತ್ಸವ ಕಾರ್ಯಕ್ರಮ ಎರಡನೆಯ ದಿನ ಬೆಲ್ಲದ ಬಂಡಿ ಉತ್ಸವ ಮೂರನೇ ದಿನ ಓಕುಳಿ ಉತ್ಸವ ವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೇಗುಲದಲ್ಲಿ ನಾನಾ ಬಗೆಯ ಹೋಮ ಗಳನ್ನ ನೆರವೇರಿಸಲಾಗುತ್ತದೆ. ಇವಿಷ್ಟೂ ಮಾತ್ರವಲ್ಲದೆ ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ತಮ್ಮ ಇಷ್ಟಾನುಸಾರ ಹರಕೆಯನ್ನು ಹೊತ್ತುಕೊಳ್ಳಬಹುದು.
ಹೆಚ್ಚಿನ ಜನರು ವೇಲ್ಯೆದೆಲೆ ಹಾರ ಸಮರ್ಪಣಾ ಸೇವೆ, ಸಿಂಧೂರ ಸೇವೆ ಅಥವಾ ಆಭರಣ ಸಮರ್ಪಣಾ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತುಕೊಳ್ತರೆ. ಅದೆಷ್ಟೇ ಕಷ್ಟಕರ ಸಮಸ್ಯೆ ಇದ್ರೂ ಈ ದೇವನ ಬಳಿ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಆ ಸಮಸ್ಯೆಗಳು ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ ಎಂದು ಈ ದೇವನನ್ನು ನಂಬಿ ಬಂದು ಜೀವನದಲ್ಲಿ ಒಳಿತನ್ನು ಕಂಡ ಭಕ್ತ ಜನರ ಮನದ ಮಾತಾಗಿದೆ. ನಿತ್ಯ ಎರಡು ಹೊತ್ತು ಪೂಜೆಗೊಳ್ಳುವ ಈ ದೇವನನ್ನು ಬೆಳಿಗ್ಗೆ 6.30 ರಿಂದ ರಾತ್ರಿ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಮಾಡಿಸಬಹುದು. ಆಂಜನೇಯ ಸ್ವಾಮಿ ನೆಲೆ ನಿಂತಿರುವ ಈ ಭವ್ಯ ಆಲಯವು ದಾವಣಗೆರೆ ಜಿಲ್ಲೆಯ ಶಾಮನೂರು ಎಂಬ ಪ್ರದೇಶದಲ್ಲಿ ಇದೆ. ಈ ದೇಗುಲವು ರಾಜಧಾನಿ ಬೆಂಗಳೂರಿನಿಂದ 264 ಕಿಮೀ, ಶಿವಮೊಗ್ಗ 64 ಕಿಮೀ, ದಾವಣಗೆರೆಯಿಂದ ಕೇವಲ 2.4 ಕಿಮೀ ದೂರದಲ್ಲಿದೆ. ಈ ದೇಗುಲಕ್ಕೆ ತಲುಪಲು ದಾವಣಗೆರೆ ಬಸ್ ನಿಲ್ದಾಣದಿಂದ ಸಾಕಷ್ಟು ಸಾರಿಗೆ ಸೌಲಭ್ಯ ಇದ್ದು, ದಾವಣಗೆರೆ ಯು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ನಿಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ. ಶುಭದಿನ.