WhatsApp Group Join Now

ಹೌದು ಮೆಂತ್ಯ ಕಾಳನ್ನು ನಾವು ಅಡುಗೆ ಪದಾರ್ಥವಾಗಿ ಬಳಕೆ ಮಾಡುತ್ತೇವೆ, ಆದ್ರೆ ಈ ಕಾಳಿನಲ್ಲಿ ಇನ್ನು ಹಲವಾರು ರೀತಿಯ ಸಮಸ್ಯೆಗೆಳಿಗೆ ಪರಿಹಾರ ಅಡಗಿದೆ.

ಮೆಂತ್ಯದ ಕಾಳನ್ನು ಹುರಿದು ಅದರ ಜತೆ ಸ್ವಲ್ಪ ಒಣ ದ್ರಾಕ್ಷಿ ಮತ್ತು ಉಪ್ಪು ಸೇರಿಸಿ ಸೇವಿಸಿದರೆ ರಕ್ತ ಭೇದಿ ನಿಲ್ಲುತ್ತದೆ ಮತ್ತು ದೇಹದ ಯಾವುದೇ ಭಾಗದಲ್ಲಿ ಊತ ಇದ್ದರೂ ಮೆಂತ್ಯದ ಕಾಳನ್ನು ನೆನೆಸಿ ಅರೆದು ಲೇಪಿಸಿದರೆ ಊತ ಬೇಗ ಕಡಿಮೆಯಾಗುತ್ತದೆ, ವಾತ ಹೆಚ್ಚಾಗಿ ಸಂಧಿಗಳಲ್ಲಿ ನೋವಿದ್ದರೆ ಮೆಂತ್ಯ ಸೊಪ್ಪಿಗೆ ಎಳ್ಳೆಣ್ಣೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಹುರಿದು ಬಟ್ಟೆಯಲ್ಲಿ ಕಟ್ಟಿ ನೋವಿರುವ ಸಂಧಿಗಳಿಗೆ ಬಿಸಿ ಬಿಸಿ ಕಾವು ಕೊಟ್ಟರೆ ನೋವು ಮತ್ತು ವಾತ ಕಡಿಮೆಯಾಗುತ್ತವೆ.

ನೀರಲ್ಲಿ ನೆನೆಸಿದ ಮೆಂತ್ಯವನ್ನು ಅರೆದು ಅದಕ್ಕೆ ಎಳ್ಳೆಣ್ಣೆ ಬೆರೆಸಿ ಚೆನ್ನಾಗಿ ಕುದಿಸಿ, ಆ ಎಣ್ಣೆಯನ್ನು ಸೋಸಿ ಇಟ್ಟುಕೊಂಡು ಪ್ರತಿ ದಿನ ಕೂದಲಿಗೆ ಹಚ್ಚಿಕೊಂಡರೆ ಕೂದಲು ಚೆನ್ನಾಗಿ ದಟ್ಟವಾಗಿ ಬೆಳೆಯುತ್ತದೆ, ಪ್ರತಿ ದಿನ ಮೆಂತ್ಯದ ಬೀಜದ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿದರೆ ರಕ್ತದಲ್ಲಿ ಹೆಚ್ಚಿರುವ ಕೊಬ್ಬಿನಂಶ ಕರಗುತ್ತದೆ.

ಮೆಂತ್ಯದ ಬೀಜವನ್ನು ನೆನೆಸಿ ಬೆಲ್ಲದ ಜತೆ ರುಬ್ಬಿ ಹಾಲಿನ ಜತೆ ಸೇರಿಸಿ ಪಾಯಸ ಮಾಡಿ ಕುಡಿದರೆ ಎದೆ ಹಾಲು ಹೆಚ್ಚುತ್ತದೆ, ಮೆಂತ್ಯದ ಕಾಳನ್ನು ತುಪ್ಪದಲ್ಲಿ ಕೆಂಪಾಗಿ ಹುರಿದು ಪುಡಿ ಮಾಡಿ ಅದಕ್ಕೆ ನಿಂಬೆರಸ ಮತ್ತು ಸೈಂಧವ ಉಪ್ಪನ್ನು ಬೆರೆಸಿ ಅನ್ನದ ಮೊದಲ ತುತ್ತಿನಲ್ಲಿ ಸೇವಿಸಿದರೆ ಅಜೀರ್ಣದಿಂದ ಕಾಡುವ ಹೊಟ್ಟೆ ನೋವು ಶಮನವಾಗುತ್ತದೆ.

ಮೆಂತ್ಯದ ಎಲೆಗಳನ್ನು ನೀರಲ್ಲಿ ಬೇಯಿಸಿ, ಅದು ತಣ್ಣಗಾದ ಮೇಲೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ, ಮೆಂತ್ಯದ ಕಾಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ಕುಡಿದರೆ ವಾತದಿಂದ ಬರುವ ನೋವು ಶಮನವಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *