ನಮಸ್ತೆ ಪ್ರಿಯ ಓದುಗರೇ, ಉದ್ಯಾನ ನಗರಿ, ಬೆಂದಕಾಳೂರು ಎಂಬೆಲ್ಲಾ ಹೆಸರಿನಿಂದ ಕರೆಯೂ ಬೆಂಗಳೂರು ಐಟಿ ಬಿಟಿ ಕಂಪನಿಗಳಿಗೆ ಮಾತ್ರ ಆಶ್ರಯ ತಾಣ ಆಗಿಲ್ಲ. ಈ ಊರಿನಲ್ಲಿ ಹಲವಾರು ಪುರಾತನವಾದ ದೇಗುಲಗಳು ಇವೆ. ಅಂತಹ ದೇಗುಲಗಳ ಪಟ್ಟಿಯಲ್ಲಿ ಸಾಕ್ಷಾತ್ ಶ್ರೀನಿವಾಸ ಸ್ವಾಮಿಯೇ ಮಾಂಡವ್ಯ ಋಷಿಗಳಿಗೆ ದರ್ಶನವನ್ನು ನೀಡಿದ ಈ ಪುಣ್ಯ ಕ್ಷೇತ್ರ ಹಲವಾರು ವೈಶಿಷ್ಟ್ಯತೆ ಯನ್ನ ತನ್ನ ಒಡಲಲ್ಲಿ ಹುದುಗಿಸಿ ಇಟ್ಟುಕೊಂಡಿದೆ. ಬನ್ನಿ ಇವತ್ತಿನ ಲೇಖನದಲ್ಲಿ ವಸಂತ ಪುರದ ವಲ್ಲಭರಾಯ ಸ್ವಾಮಿಯನ್ನು ದರ್ಶನ ಮಾಡಿ ಕೃತಾರ್ಥರಾಗೋಣ. ಪ್ರಾಚೀನ ಕಾಲದಲ್ಲಿ ಕಲ್ಯಾಣ ಪುರಿ ಎಂದು ಕರೆಯಲಾಗುತ್ತ ಇದ್ದ ವಸಂತಪೂರದಲ್ಲಿ 19 ನೆ ಶತಮಾನಕ್ಕೆ ಸೇರಿದ ವಲ್ಲಭಾರಾಯ ಸ್ವಾಮಿಯ ಪುರಾತನವಾದ ದೇವಾಲಯ ಇದ್ದು, ಈ ಆಲಯವು ಗೋಪುರ, ಗರ್ಭಗೃಹ, ಅಂತರಾಳ, ನವರಂಗ ಮಂಟಪ, ಪಾತಾಳ ಮಂಟಪ ಮತ್ತು ಮುಖ ಮಂಟಪ ಗಳನ್ನು ಒಳಗೊಂಡಿದೆ. ಹರಿಹರ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ವಾಲ್ಲಭಾರಾಯ ಸ್ವಾಮಿಯ ಭವ್ಯ ಆಲಯವನ್ನು ವಿಜಯನಗರದ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ವೆಂಕಟರಮಣ ಸ್ವಾಮಿಯು ಹೆಚ್ಚಿನ ದೇಗುಲಗಳಲ್ಲಿ ಬಲ ಕೈಯನ್ನು ಚಾಚಿ ನಿಂತಿದ್ದರೆ, ಈ ಕ್ಷೇತ್ರದಲ್ಲಿ ದೇವನು ಬಲ ಕೈಯಲ್ಲಿ ಅಭಯ ಹಸ್ತವನ್ನು ತೋರುತ್ತಾ ಶ್ರೀದೇವಿ ಭೂದೇವಿ ಸಮೇತನಾಗಿ ಇಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಸ್ವಾಮಿಯ ಈ ವಿಗ್ರಹಕ್ಕೆ 1500 ವರ್ಷಗಳಷ್ಟು ಇತಿಹಾಸ ಇದೆ. ಈ ಸ್ಥಳದಲ್ಲಿ ಸಾಕ್ಷಾತ್ ಶ್ರೀನಿವಾಸ ಸ್ವಾಮಿಯೇ ಇಷ್ಟ ಪಟ್ಟು ಬಂದು ನೆಲೆಸಿದ ಎಂದು ಹೇಳಲಾಗುತ್ತದೆ. ದೇಗುಲದ ಗರ್ಭ ಗುಡಿಯಲ್ಲಿ ಇರುವ ವೆಂಕಟೇಶ್ವರನ ಮೂರ್ತಿಯನ್ನು ಮಾಂಡವ್ಯ ಮುನಿಗಳು ಇಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದ್ದು, ಈ ಕ್ಷೇತ್ರದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವ ಹಿಂದೆ ಒಂದು ಕಥೆ ಕೂಡ ಇದೆ.
ಒಂದು ಬಾರಿ ಮಾಂಡವ್ಯ ಮಹರ್ಷಿಗಳ ಕನಸಿನಲ್ಲಿ ಶ್ರೀಮಾನ್ ನಾರಾಯಣನು ಕಾಣಿಸಿಕೊಂಡು ನಾನು ಕಲ್ಯಾಣ ಪುರಿಯ ದಕ್ಷಿಣ ಬೆಟ್ಟದ ಮೇಲೆ ನೆಲೆ ಸಿದ್ದೇನೆ. ನೀನು ನನ್ನ ವಿಗ್ರಹವನ್ನು ಇದೇ ಪ್ರದೇಶದಲ್ಲಿ ಪ್ರತಿಷ್ಠಾಪನೆ ಮಾಡು. ಮುಂದೆ ಈ ಕ್ಷೇತ್ರವು ಪ್ರಖ್ಯಾತಿ ಆಗುತ್ತೆ ಎಂದು ಹೇಳಿದರ ಪರವಾಗಿ ಮಾಂಡವ್ಯ ಮಹರ್ಷಿಗಳು ಈ ಕ್ಷೇತ್ರದಲ್ಲಿ ಶ್ರೀನಿವಾಸ ನ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿದರು ಎಂದು ಹೇಳಲಾಗುತ್ತದೆ. ಇನ್ನೂ ಭಕ್ತ ವತ್ಸಲ ನಾದ ಈ ಕ್ಷೇತ್ರಕ್ಕೆ ಮದುವೆ ಆಗದೇ ಇರುವವರು ಬಂದು ದೇವರ ಬಳಿ ಇರುವ ಕಂಕಣವನ್ನು ಕಟ್ಟಿಕೊಂಡು ಹೋದ್ರೆ 48 ದಿನಗಳಲ್ಲಿ ವಿವಾಹ ಸಂಭಂದ ನಿಶ್ಚಯ ಆಗುತ್ತಂತೆ. ಶ್ರೀ ಶ್ರೀನಿವಾಸನಿಗೆ ರೋಹಿಣಿ ನಕ್ಷತ್ರ ದಲ್ಲಿ 16 ವಾರಗಳ ಕಾಲ ಹಾಲಿನ ಅಭಿಷೇಕ ಮಾಡಿಸಿ ಆ ತೀರ್ಥವನ್ನು ಸೇವಿಸಿದರೆ ಸಂತಾನ ಇಲ್ಲದೆ ಕೊರಗುವ ದಂಪತಿಗಳಿಗೆ ಉತ್ತಮವಾದ ಸಂತಾನ ಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ. ಸ್ವಾಮಿಗೆ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತರೆ, ಮನದಲ್ಲಿರುವ ಕೋರಿಕೆಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಸ್ಥಳದ ಪುರಾಣವನ್ನು ಯಾರು ಶ್ರ ದ್ದಾ ಭಕ್ತಯಿಂದ ಓದುತ್ತಾರೋ ಅಥವಾ ಕೇಳುತ್ತಾರೋ ಅವರಿಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೀರ್ತಿಯನ್ನು ಈ ದೇವ ದಯಪಾಲಿಸು ತ್ತನೆ ಎಂದು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯನ್ನು ಆರಾಧಿಸಿದ ಭಕ್ತ ಜನರ ಮನದ ಮಾತಾಗಿದೆ.
ಇಲ್ಲಿ ನೆಲೆಸಿರುವ ವಲ್ಲಭರಾಯಾ ಸ್ವಾಮಿಯ ದರ್ಶನ ಮಾಡಿದರೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಇಲ್ಲಿರುವ ವಲ್ಲಭಾರಾಯಾ ಸ್ವಾಮಿಯು ಶ್ರೀದೇವಿ ಭೂದೇವಿ ಯರ ಒಡನೆ ವಸಂತ ಸ್ನಾನವನ್ನು ಮಾಡಿದ್ದರ ಫಲವಾಗಿ ಸ್ವಾಮಿಯು ನೆಲೆಸಿರುವ ಈ ಊರಿಗೆ ವಸಂತಪುರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ವಲ್ಲಾಭರಾಯ ಸ್ವಾಮಿಯ ದೇವಸ್ಥಾನದ ಎಡ ಭಾಗದಲ್ಲಿ ಆಂಜನೇಯ ಸ್ವಾಮಿಯ ಗುಡಿ ಇದ್ದು, ಈ ಗುಡಿಯ ಸಮೀಪದಲ್ಲಿ ಸುದರ್ಶನ ಹಾಗೂ ನರಸಿಂಹ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಪ್ರತಿ ವರ್ಷವೂ ಈ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಹಾಗೂ ತಿರುಪತಿ ಯಲ್ಲಿ ನಡೆಯುವಂತೆ ಕಲ್ಯಾಣೋತ್ಸವ, ಬ್ರಹ್ಮ ರಥೋತ್ಸವ ಹಾಗೂ ತೆಪಪೋತ್ಸವ ಗಳನ್ನ ವಿಧಿವತ್ತಾಗಿ ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯ ಪಾಂಚರಾತ್ರಾಗಮ ರೀತಿಯಲ್ಲಿ ಪೂಜೆ ಗೊಳ್ಳುತ್ತೀರುವ ಇಲ್ಲಿನ ವಾಲಭರಾಯ ಸ್ವಾಮಿಯನ್ನು ಬೆಳಿಗ್ಗೆ 7- ಮಧ್ಯಾನ 12.30 ರ ವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಭಿಷೇಕ ಸೇವೆ, ಅಲಂಕಾರ ಸೇವೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಈ ಪುಣ್ಯ ಕ್ಷೇತ್ರವೂ ಬೆಂಗಳೂರಿನ ವಸಂತ ಪುರದಲ್ಲಿದ್ದು. ಮೆಜೆಸ್ಟಿಕ್ ಇಂದ 11 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಭೇಟಿ ನೀಡಿ ಆ ದೇವನ ಕೃಪೆಗೆ ಪಾತ್ರರಾಗಿ. ಶುಭದಿನ.