WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಚಂಡಿ, ಚಾಮುಂಡಿ, ಜಗದಾಂಬೇ, ಮಹಿಷಾಸುರ ಮರ್ಧಿನಿ, ಕಾತ್ಯಾಯಿನಿ, ಮಹಾ ಗೌರಿ ಎಂಬೆಲ್ಲ ಹೆಸರಿನಿಂದ ಕರೆಯೂ ಜಗನ್ಮಾತೆಯನ್ನು ಅಮ್ಮಾ ಎಂದು ಭಕ್ತಿಯಿಂದ ಕೂಗಿದರೂ ಸಾಕು ಭಕ್ತರನ್ನು ಸಂಕಷ್ಟದಿಂದ ಪಾರು ಮಾಡಲು ಆ ತಾಯಿ ಓಡೋಡಿ ಬರ್ತಾಳೆ. ಅದರಲ್ಲಿಯೂ ಆದಿಶಕ್ತಿ ಆದ ಶ್ರೀ ಮಣ್ಣಮ್ಮ ದೇವಿಯಾಗಿ ನೆಲೆಸಿದ ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಬದುಕಿನ ಎಲ್ಲ ಕಷ್ಟಗಳಿಗೆ ಈ ತಾಯಿ ಪರಿಹಾರ ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಪವಾಡ ದೇವತೆಯಾದ ಸಾಕ್ಷಿಹಳ್ಳಿಯ ಮಣ್ಣಮ್ಮ ದೇವಿಯ ಪಾದಾರವಿಂದವನ್ನು ದರ್ಶನ ಮಾಡಿ ಪುನೀತರಾಗೋಣ. ಸಾಲು ಹಳ್ಳಿಗಳ ಸಾಮ್ರಾಜ್ಯದ ಒಡತಿಯಾದ ಮಣ್ಣಮ್ಮ ದೇವಿಯು ಸಾಕ್ಷಿಹಳ್ಳಿಯಲ್ಲಿ ನೆಲೆ ನಿಂತಿದ್ದು, ತಾಯಿಯ ಈ ಆಲಯವು ಸುಮಾರು 700 ವರ್ಷಗಳಷ್ಟು ಪುರಾತನವಾದದ್ದು ಎಂದು ಹೇಳಲಾಗುತ್ತದೆ. ಸುತ್ತಲಿನ 11 ಗ್ರಾಮಗಳ ಗ್ರಾಮ ದೇವತೆಯಾಗಿ ಈ ದೇವಿಯು ಪೂಜಿಸಲ್ಪಡುತ್ತಾಳೆ. ಸ್ಥಳೀಯ ಜನರ ಹೇಳಿಕೆ ಪ್ರಕಾರ ದೇವಿಯ ಈ ಆಲಯವನ್ನು ಚಿತ್ರದುರ್ಗದ ಪಾಳೆಗಾರರು ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರೂ ಈ ದೇವಿಯ ಆಲಾಯಕ್ಕೆ ಹೋದ್ರೆ ಆಗ ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಸಂತಾನ ಸಮಸ್ಯೆ, ಆರ್ಥಿಕ ಸಮಸ್ಯೆ, ಇಷ್ಟಾರ್ಥ ಸಿದ್ಧಿ, ಕೌಟುಂಬಿಕ ಸಮಸ್ಯೆ, ವ್ಯಾಪಾರ ವ್ಯವಹಾರ ಸಮಸ್ಯೆ, ಅನಾರೋಗ್ಯ ಸಮಸ್ಯೆ ಹೀಗೆ ಯಾವುದೇ ಸಮಸ್ಯೆ ಇದ್ರೂ ಅವರು ಈ ಕ್ಷೇತ್ರಕ್ಕೆ ಬಂದು ತಾಯಿಯ ಬಳಿ ಭಕ್ತಿಯಿಂದ ಸಮಸ್ಯೆಗಳನ್ನು ಹೇಳಿಕೊಂಡರೆ, ಆ ತಾಯಿಯು ಹೂವು ಪ್ರಸಾದ ಬಿಲಿಸುವುದರ ಪ್ರಕಾರ ಭಕ್ತರ ಸಮಸ್ಯೆಗಳಿಗೆ ಉತ್ತರವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತಿದೆ. ತಾಯಿಯ ಬಲಗಡೆ ಇಂದ ಹೂವು ಬಿದ್ದರೆ ಕಾರ್ಯ ಸಿದ್ಧಿ ಆಗುತ್ತೆ ಎಂದು, ಎಡಗಡೆ ಇಂದ ಬಿದ್ದರೆ ಕಾರ್ಯ ಸಿದ್ಧಿ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ನಿತ್ಯವೂ ನೂರಾರು ಮಂದಿ ಆಮ್ಮನವರಲ್ಲಿ ಹೂವು ಪ್ರಸಾದ ಕೇಳಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳತ್ತಾರೆ. ಜಾನಪದ ಕಥೆಯ ಪ್ರಕಾರ ಮಣ್ಣಮ್ಮನ ಮೂಲ ಸ್ಥಾನ ಮಣ್ಣೆ ಆಗಿದ್ದು, ಮಣ್ಣಮ್ಮ ದಂಡಿನ ಮಾರಮ್ಮ, ಮಾದಾಪೂರದಮ್ಮ, ಏರೆ ಕಟ್ಟೆಯಮ್ಮನ ಸೇರಿದಂತೆ ಏಳು ಅಕ್ಕ ತಂಗಿಯರ ಮೂಲ ವಿಗ್ರಹವೂ ಏಳು ತುಂಡುಗಳಾಗಿ ಒಂದೊಂದು ಗ್ರಾಮದಲ್ಲಿ ಬಿದ್ದಿದ್ದರ ಫಲವಾಗಿ ಈ ಕ್ಷೇತ್ರದಲ್ಲಿ ಮಣ್ಣಮ್ಮ ದೇವಿ ಬಂದು ನೆಲೆಸಿದಳು ಎಂದು ಹೇಳಲಾಗುತ್ತದೆ.

ಅತ್ಯಂತ ಜಾಗೃತ ಸ್ಥಳ ಎಂದು ಕರೆಸಿಕೊಳ್ಳುವ ಈ ದೇವಿಯ ಆಲಯಕೆಕೆ ರಾಜ್ಯದ ನಾನಾ ಭಾಗಗಳಲ್ಲಿ ಭಕ್ತರು ಇದ್ದು, ಈ ದೇವಿಯನ್ನು ನಂಬಿದವರ ಕೈಯನ್ನು ಆ ತಾಯಿ ಎಂದಿಗೂ ಕೈ ಬಿಟ್ಟಿಲ್ಲ ಎನ್ನಲಾಗುತ್ತದೆ. ನಿತ್ಯ ಪೂಜೆಗೊಳ್ಳುತ್ತಿರುವ ಈ ದೇವಿಗೆ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಅಮಾವಾಸ್ಯೆ ಗಳಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನವರಾತ್ರಿಯ ಒಂಭತ್ತು ದಿನವೂ ತಾಯಿಗೆ ವಿವಿಧ ಬಗೆಯ ಅಲಂಕಾರ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಚೈತ್ರ ಅಥವಾ ವೈಶಾಖ ಮಾಸದಲ್ಲಿ ಮನ್ನಾಮ್ಮ ದೇವಿಯ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಆ ಸಮಯದಲ್ಲಿ ಸಾರ್ವಾಲಂಕೃತ ಆದ ಅಮ್ಮನವರನ್ನು ನೋಡುವುದೇ ಕಣ್ಣಿಗೆ ಹಬ್ಬ. ಅನುದಿನವೂ ಪೂಜೆಗೊಳ್ಳುತ್ತಿರುವ ಈ ದೇವಿಯ ಆಲಾಯಕ್ಕೇ ದಿನದ 24 ಗಂಟೆಯೂ ಭೇಟಿ ನೀಡಬಹುದು. ಇಲ್ಲಿ ಬರುವ ಭಕ್ತಾದಿಗಳು ಮಂಗಳಾರತಿ, ಅಲಂಕಾರ ಸೇವೆ, ಕುಂಕುಮಾರ್ಚನೆ ಸೇರಿದಂತೆ ಇನ್ನೂ ಹಲವಾರು ಸೇವೆಯನ್ನು ಮಾಡಿಸಬಹುದು. ನನ್ನಮ್ಮ ದೇವಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಸಾಕ್ಷಿಹಳ್ಳ ಗ್ರಾಮದಲ್ಲಿದೆ. ಈ ಆಲಯವು ರಾಜಧಾನಿ ಬೆಂಗಳೂರಿನಿಂದ 139 ಕಿಮೀ, ಹಾಸನದಿಂದ 131, ತುಮಕೂರಿನಿಂದ 71 ಕಿಮೀ, ಗುಬ್ಬಿಯಿಂದ 51 ಕಿಮೀ, ಶಿರಾ ದಿಂದ 29 ಕಿಮೀ, ದೂರದಲ್ಲಿದೆ. ಶಿರಾವು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ. ಶಿರಾ ಹುಳಿಯಾರ್ ರಸ್ತೆ ಮಾರ್ಗದಲ್ಲಿ ಸಿಗುವ ಹುಯಿಲ್ ದೊರೆ ಗ್ರಾಮದ ಬಳಿ ಎಡಕ್ಕೆ ತಿರುಗಿ 5 ಕಿಮೀ ಕ್ರಮಿಸಿದರೆ ಸಾಕ್ಷಿ ಹಳ್ಳಿಯ ಈ ದೇವಿಯ ಆಲಯಕ್ಕ ತಲುಪಬಹುದು. ಸಾಧ್ಯವಾದರೆ ನೀವು ಒಮ್ಮೆ ಭೇಟಿ ನೀಡಿ. ಆ ತಾಯಿಯ ಕೃಪೆಗೆ ಪಾತ್ರರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *