ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟನಾದ ಹನುಮಂತ ಸ್ವಾಮಿಯು ನೆಲೆ ನಿಲ್ಲದ ಊರುಗಳು ಇಲ್ಲ ಎಂದು ಹೇಳಬಹುದು. ಬುದ್ಧಿ ಬಲ ಧೈರ್ಯವನ್ನು ಹೊಂದಿರುವ ಈ ಸ್ವಾಮಿ ಅಸಾಧ್ಯವಾದ ಕೆಲವನ್ನು ಸಾಧಿಸಲು ಪ್ರೇರಣೆ ಆಗಿದ್ದಾನೆ. ಅದರಲ್ಲೂ ಆಂಜನೇಯ ಸ್ವಾಮಿ ನೆಲೆಸಿದ ಈ ಕ್ಷೇತ್ರಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿಯ ಬಳಿ ಪ್ರಶ್ನೆಗಳ ಕೇಳಿದ್ರೆ ಆತ ನಮಗೆ ಉತ್ತರವನ್ನು ನೀಡ್ತನಂತೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಆ ಪುಣ್ಯ ಕ್ಷೇತ್ರ ಯಾವುದು ಅಲ್ಲಿನ ವಿಶೇಷತೆಗಳು ಏನೇನು ಎಂದು ತಿಳಿದುಕೊಳ್ಳೋಣ. ಕನಕಗಿರಿಯ ಸಮೀಪದಲ್ಲಿ ಇರುವ ಕರಡಿಗುಡ್ಡದಲ್ಲಿ ಪುರಾತನವಾದ ಆಂಜನೇಯ ಸ್ವಾಮಿಯ ಈ ದಿವ್ಯ ದೇಗುಲವಿದೆ. ಈ ಆಲಯವು ಗರ್ಭಗೃಹ, ಗರುಡ ಗಂಬ ಪುಟ್ಟದಾದ ಗೋಪುರ ವನ್ನಾ ಒಳಗೊಂಡಿದೆ. ದೇಗುಲದ ಗೋಡೆಗಳ ಮೇಲೆ ಹಲವಾರು ಉಕ್ತಿಗಳನ್ನು ಬರೆಯಲಾಗಿದ್ದು, ದೇವಸ್ಥಾನವನ್ನು ಕೆಲ ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ. ಬಹಳ ಹಿಂದೆ ಈ ಪ್ರದೇಶದಲ್ಲಿ ಕರಡಿಗಳು ಹೆಚ್ಚಾಗಿ ವಾಸಿಸುತ್ತಿದ್ದ ಕಾರಣ ಈ ಪ್ರದೇಶಕ್ಕೆ ಕರಡಿ ಗುಡ್ಡ ಎಂಬ ಹೆಸರು ಬಂದಿದೆ. ಈ ದೇವಸ್ಥಾನದ ವಿಶೇಷತೆ ಏನಂದ್ರೆ, ದೇಗುಲದ ಗರ್ಭ ಗುಡಿಯಲ್ಲಿ ಎರಡು ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವರ ಮೂಲ ಮೂರ್ತಿಯನ್ನು ಜಯಮೆಯ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟು ಈ ಮೂರ್ತಿಗೆ ಸುಮಾರು ಐದು ಸಾವಿರ ವರ್ಷಗಳ ಪುರಾತನವಾದ ಇತಿಹಾಸ ಇದೆ. ಸರ್ಪ ಯಾಗಗಳಲ್ಲಿ ಸರ್ಪಗಳನ್ನು ಕೊಂದ ನಂದ ನಂತರ ಜನಮೆಯ ರಾಜನು ತನ್ನ ಪಾಪ ಪ್ರಾಯಶ್ಚಿತ್ತ ಕ್ಕಾಗಿ ದಕ್ಷಿಣ ಭಾರತದಲ್ಲಿ ತೀರ್ಥಯಾತ್ರೆ ಮಾಡಿ ತಾನು ಹೋದಲ್ಲೆಲ್ಲ ದೇವರ ವಿಗ್ರಹವನ್ನು ಪ್ರಿಷ್ಟಾಪಿಸಿದನಂತೆ.
ಆ ರೀತಿ ಜಯಾಮೆಯ ರಾಜನು ಪ್ರತಿಷ್ಠಾಪಿಸಿದ ದೇವರುಗಳಲ್ಲಿ ಈ ಕರಡಿ ಗುಡ್ಡದ ಆಂಜನೇಯ ಸ್ವಾಮಿಯ ವಿಗ್ರಹವೂ ಒಂದಾಗಿದೆ. ಇನ್ನೂ ಗರ್ಭ ಗುಡಿಯಲ್ಲಿ ಇರುವ ಐದು ಅಡಿಯ ಎತ್ತರದ ಕಪ್ಪು ವರ್ಣದ ಆಂಜನೇಯ ಸ್ವಾಮಿಯ ಮತ್ತೊಂದು ವಿಗ್ರಹವನ್ನು ವ್ಯಾಸರಾಜರು ಪ್ರತಿಷ್ಠಾಪನೆ ಮಾಡಲಾಗಿದೆ. ಸ್ವಾಮಿಯು ಅಭಯ ಹಸ್ತವನ್ನು ಹಿಡಿದು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಉದ್ಯೋಗ ಸಮಸ್ಯೆ, ವ್ಯವಹಾರದ ಸಮಸ್ಯೆ,ವಿಧ್ಯಾಭ್ಯಾಸ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಸಂತಾನ ಸಮಸ್ಯೆ, ಜಮೀನಿನ ವ್ಯವಹಾರದ ತೊಂದರೆ ಹೀಗೆ ಯಾವುದೇ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಈ ದೇವನ ಬಳಿ ಹೊತ್ತು ತಂದರೂ ಕರುಣಾ ಪೂರಿತನಾದ ಸ್ವಾಮಿಯು ಪರಿಹಾರ ನೀಡ್ತಾರೆ. ಇಲ್ಲಿಗೆ ಬಂದು ಸ್ವಾಮಿಯ ಎದುರಿಗೆ ಮನದಲ್ಲಿರುವ ಪ್ರಶ್ನೆಗಳನ್ನು ಕೇಳಿದರೆ ಆಂಜನೇಯ ಸ್ವಾಮಿ ಪತ್ರೆಯನ್ನು ಬೀಳಿಸುವುದರ ಮೂಲಕ ಉತ್ತರವನ್ನು ನೀಡುತ್ತಾನೆ. ಒಂದು ಎರೆಡು ಮೂರು ಹೀಗೆ ವಿವಿಧ ಸಂಖ್ಯೆಯಲ್ಲಿ ಪತ್ರೆಯನ್ನೂ ಬೀಳಿಸುವುದರ ಮೂಲಕ ಭವಿಷ್ಯವನ್ನು ಕೂಡ ಈ ಸ್ವಾಮಿ ನುಡಿಯುತ್ತಾನೆ. ಇದುವರೆಗೂ ಈ ದೇವ ಹೇಳಿದ ಭವಿಷ್ಯ ಸುಳ್ಳಗಿಲ್ಲ.
ಹೀಗಾಗಿ ಸಾಮಾನ್ಯ ಜನರು ಅಲ್ಲದೆ ರಾಜಕಾರಣಿಗಳು ಕೂಡ ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಶನಿವಾರ, ಹುಣ್ಣಿಮೆ ಅಮಾವಾಸ್ಯೆ ದಿನ ಈ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಪ್ರತಿ ವರ್ಷವೂ ಎಳ್ಳು ಅಮಾವಾಸ್ಯೆ ಅಂದು ಇಲ್ಲಿಯ ಸ್ವಾಮಿಯ ಜಾತ್ರಾ ಮಹೋತ್ಸವ ವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜಾತ್ರೆಯ ದಿನ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಈ ದಿನ ಕರಡಿ ಗುಡ್ಡದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಎಲ್ಲರೂ ಈ ದೇವಾಲಯಕ್ಕೆ ಬಂದು ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಈ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಮಾಡಿಸಬಹುದು. ಕಳೆದ 70 ವರ್ಷಗಳಿಂದ ಕನಕದಾಸ ಕುಟುಂಬದವರು ಇಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ದೇಗುಲದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8123459653 ಈ ಸಂಖ್ಯೆಗೆ ಸಂಪರ್ಕಿಸಬಹುದು. ಈ ಪುಣ್ಯ ಕ್ಷೇತ್ರವೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕರಡಿ ಗುಡ್ಡ ಎಂಬ ಪುಟ್ಟ ಗ್ರಾಮದಲ್ಲಿದೆ. ಈ ದೇಗುಲವು ಪುರಾಣ ಪ್ರಸಿದ್ಧವಾದ ಕನಕಗಿರಿ ಲಕ್ಷ್ಮೀ ನರಸಿಂಹ ಸ್ವಾಮಿಯ ದೇಗುಲದಿಂದ ಕೇವಲ 6 ಕಿಮೀ ದೂರದಲ್ಲಿದೆ. ಕೊಪ್ಪಳದಿಂದ 44 ಕಿಮೀ ದೂರವಿರುವ ಕನಕಗಿರಿ ಗೆ ಕೊಪ್ಪಳದಿಂದ ಸಾಕಷ್ಟು ಬಸ್ ಸೌಲಭ್ಯ ಇದೆ. ಕನಕಗಿರಿಯ ನ್ನಾ ದರ್ಶನ ಮಾಡಿ ಅಲ್ಲಿಂದ ಬಾಡಿಗೆ ವಾಹನದಲ್ಲಿ ಸುಲಭವಾಗಿ ಈ ದೇಗುಲಕ್ಕೆ ತಲುಪಬಹುದು. ಸಾಧ್ಯವಾದರೆ ಅತ್ಯಂತ ಪುರಾತನವಾದ ಆಂಜನೇಯ ಸ್ವಾಮಿಯ ಈ ದೇಗುಲಕ್ಕೆ ಜೀವಮಾನದಲ್ಲಿ ನೀವೂ ಒಮ್ಮೆ ಭೇಟಿ ನೀಡಿ ಅವನ ಅನುಗ್ರಹ ಪಡೆಯಿರಿ. ಶುಭದಿನ.