ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿ ಇರುವ ಒಂದೊಂದು ಜಿಲ್ಲೆಯು ಒಂದೊಂದು ಬಗೆಯ ವೈಶಿಷ್ಟ್ಯತೆಯನ್ನು ತನ್ನ ಒಡಲಾಲದಲ್ಲಿ ಹುದುಗಿಸಿ ಇಟ್ಟುಕೊಂಡಿದೆ. ಅದ್ರಲ್ಲೂ ತಾಯಿ ಮಾರಿಕಾಂಬೆಯ ಮಡಿಲಿನಲ್ಲಿ ಇರುವ ಶಿರಸಿ ಎಂಬ ಊರು ಒಂದಿಷ್ಟು ಧಾರ್ಮಿಕ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ಪ್ರಸಿದ್ಧಿ ಆಗಿದೆ. ಈ ಊರಿನಲ್ಲಿ ಮಾರಿಕಾಂಬೆ ಮಾತ್ರವಲ್ಲ ಪಾರ್ವತಿ ದೇವಿಯ ಪತಿಯಾದ ಪರಮೇಶ್ವರ ದೇವರು ಕೂಡ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಬನ್ನಿ ಇವತ್ತಿನ ಲೇಖನದಲ್ಲಿ ಅಗಾಧ ಮಹಿಮೆಯನ್ನು ಉಳ್ಳ ಸದಾಶಿವಳ್ಳಿಯ ಸದಾಶಿವನ ಕಣ್ಣು ತುಂಬಿಕೊಂಡು ಬರೋಣ. ಸದಾಶಿವ ನು ನೆಲೆಸಿರುವ ಹಳ್ಳಿಯೆಂದೆ ಕ್ಯತವಾದ ಸದಾಶಿವಳ್ಳಿಯ ಸ್ವಚ್ಛ ಸುಂದರವಾದ ಪರಿಸರದಲ್ಲಿ ಜಾಗದೇಶ್ವರನು ಸದಾಶಿವ ಎಂಬ ನಾಮದಿಂದ ನೆಲೆಗೊಂಡು ಭಕ್ತರನ್ನು ಹರಸುತ್ತಿದ್ದು ಈ ದೇವನು ಸದಾಶಿವಳ್ಳಿ ಗ್ರಾಮದ ಸುತ್ತ ಹಳ್ಳಿಗಳಿಗೆ ಗ್ರಾಮ ದೇವರಾಗಿ ಪೂಜಿಸಲ್ಪಡುತ್ತ ಇದ್ದಾನೆ. ಈ ದೇಗುಲವು ಸೌದೆಯ ಅರಸರ ಆಳ್ವಿಕೆಯ ಕಾಲಕ್ಕೆ ಸೇರಿದ ಪ್ರತೀತಿ ಇದ್ದು, ದೇಗುಲದ ಗರ್ಭ ಗುಡಿ, ಪ್ರದಕ್ಷಿಣಾ ಪಥ ಹಾಗೂ ಪ್ರಾಂಗಣವನ್ನು ಒಳಗೊಂಡಿದೆ. ಪಂಚಪೀಠದ ಮೇಲೆ ಸದಾಶಿವ ನು ವಿರಾಜಮಾನಾಗಿದ್ದಾರೆ. ಈ ದೇವರು ಪಂಚ ಪೀಠಸ್ಥ ಆಗಿದ್ದರಿಂದ ಈ ಕ್ಷೇತ್ರಕ್ಕೆ 60 ವರ್ಷ ಆಕರ್ಷಣೆ ಇದೆ ಎಂದು ಹೇಳಲಾಗುತ್ತದೆ. ಬದುಕಿನಲ್ಲಿ ಅದು ಇಂಥದ್ದೇ ಸಮಸ್ಯೆ ಬರಲಿ ಈ ಕ್ಷೇತ್ರಕ್ಕೆ ಬಂದು ಸ್ವಾಮಿಗೆ ತಮ್ಮ ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತರೆ, ಆ ಸಮಸ್ಯೆಗಳು ಎಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ವಿವಾಹ ವಿಳಂಬ ಸಮಸ್ಯೆ ಇದ್ದರೆ ಇಲ್ಲಿಗೆ ಬಂದು ಸದಾಶಿವ ನೀಗೆ ಬಿಳಿ ಹೂ ಗಳಿಂದ ಅಷ್ಟೋತ್ತರ ಶತ ನಾಮ ಪೂಜೆ ಮಾಡಿಸಿದರೆ ಶೀಗ್ರಾವಾಗಿ ವಿವಾಹ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ವಿವಾಹ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಭಕ್ತರು ತಮ್ಮ ಮನಸ್ಸಿನಲ್ಲಿ ಇರುವ ಪ್ರಶ್ನೆಗಳನ್ನು ಕೇಳಿದರೆ ಸ್ವಾಮಿಯು ಅಡಿಕೆ ಸಿಂಗಾರವನ್ನು ಬೀಳಿಸುವುದ್ರ ಮುಖಾಂತರ ಉತ್ತರವನ್ನು ನೀಡುತ್ತಾನೆ.
ಶ್ರೀ ದೇವರ ತಲೆಯ ಮೇಲೆ ಅಡಿಕೆ ಸಿಂಗಾರ ಇಟ್ಟು ಪ್ರಶ್ನೆಗಳನ್ನು ಕೇಳೋದು ಈ ಕ್ಷೇತ್ರದ ವಿಶೇಷತೆ ಆಗಿದೆ. ಇನ್ನೂ ಗ್ರಾಮದ ಸುತ್ತ ಮುತ್ತಲಿನಪರಿಸರದಲ್ಲಿ ಎಲ್ಲೆ ಶುಭ ಕಾರ್ಯ ನಡೆದರೂ ದೇವರಿಗೆ ತೆಂಗಿನ ಕಾಯಿ ಇಡೋದು ಹಾಗೂ ಶುಭ ಕಾರ್ಯ ಮುಗಿದ ನಂತರ ತೆಂಗಿನ ಕಾಯಿಯ ಪ್ರಸಾದವನ್ನು ಪಡೆದುಕೊಂಡು ಹೋಗುವ ಪದ್ಧತಿ ಕೂಡ ಈ ಕ್ಷೇತ್ರದಲ್ಲಿ ತಲಾಥಲಾಂತರ ದಿಂದ ನಡೆದುಕೊಂಡು ಬಂದಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಬಹಳ ಹಿಂದೆ ಜನರು ವಾಸ್ತವ್ಯ ಮಾಡುವ ಸ್ಥಳದಿಂದ ನಾಲ್ಕು ಕಿಮೀ ಹೊರಗೆ ಇರುವ ಕತ್ಲೇಹಳ್ಳ ಎಂಬ ಹೆಸರಿನ ದಟ್ಟ ಅಡವಿಯಲ್ಲಿ ಶಿವನ ಈ ಲಿಂಗವಿತ್ತು, ಅಪಾರ ಮಹಿಮೆಯುಳ್ಳ ಈ ಶಿವ ಲಿಂಗವು ಕಾಡಿನಲ್ಲಿ ಇರುವುದರಿಂದ ದೇವರಿಗೆ ಪೂಜೆ ಸಲ್ಲಿಸಿ ಬರುವುದು ಊರಿನವರಿಗೆ ಕಷ್ಟ ಆಗ್ತಾ ಇತ್ತು ಹೀಗಾಗಿ ಊರಿನವರು ಊರಿನ ಮಧ್ಯದಲ್ಲಿ ಶಿವನ ಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಬೇಕು ಎಂದುಕೊಂಡು ದೇವರಲ್ಲಿ ಪ್ರಶ್ನೆ ಕೇಳಿದಾಗ, ಸದಾಶಿವ ನು ತಾನೆಲ್ಲೋ ಬರೋದಿಲ್ಲ ನಂಗೆ ಇಲ್ಲಿಯೇ ದೇವಸ್ಥಾನ ಕಟ್ಟಿಸಿ ಎಂದು ಉತ್ತರ ನೀಡಿದನಂತೆ. ಹೀಗಾಗಿ ಮುಂದೆ ವಿಶಾಖ ಹೂವು ವಿಶಾಖ ಪಾತ್ರೆ ಹಾಗೂ ಬಿಲ್ವ ಪತ್ರೆ ಮರಗಳಿಂದ ಕೂಡಿರುವ ದಟ್ಟ ಕಾನನದ ನಡುವೆ ಸದಾಶಿವ ಗೆ ಈ ಸುಂದರವಾದ ಆಲಯವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಸದಾಶಿವನ ಜೊತೆಗೆ ಗಣಪತಿ, ದುರ್ಗೆ, ಭೂತರಾಜರ, ನಾಗ ದೇವತೆ, ವನ ದುರ್ಗೆ ಕೂಡ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಇನ್ನೂ ಸ್ವರ್ಣವಲ್ಲೀ ಮಠದ ಈಗಿನ ಪೀಠಾಧಿಪತಿ ಆಗಿರುವ ಶ್ರೀಮದ್ ಗಂಗಧರೇಂದ್ರ ಸರಸ್ವತಿ ಸ್ವಾಮೀಜಿಯವರ ಮೂಲ ಆಶ್ರಮದವರು ಅನಾದಿ ಕಾಲದಿಂದಲೂ ಈ ದೇಗುಲಕ್ಕೆ ನಡೆದುಕೊಳ್ಳುತ್ತಾರೆ, ಶ್ರೀಗಳು ಕೂಡ ಈ ಸನಿಧ್ಯಕ್ಕೆ ಆಗಮಿಸಿ ಸದಾಶಿವನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
ಸರ್ವ ಧರ್ಮಿಯರು ಶ್ರದ್ಧಾ ಭಕ್ತಿಗಳಿಂದ ನಡೆದುಕೊಳ್ಳುವ ಸದಾಶಿವನ ಸನ್ನಿಧಿಯಲ್ಲಿ ಪ್ರತಿ ವರ್ಷವೂ ಕಾರ್ತಿಕ ಶುದ್ಧ ತ್ರಯೋದಶಿ ಯಾಂದೂ ವಿಶೇಷ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದ ದೀಪೋತ್ಸವ, ಶಿವರಾತ್ರಿ ಹಬ್ಬಗಳಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. 30 ವರ್ಷಗಳ ಹಿಂದೆ ಇಲ್ಲಿ ವರ್ಷದಲ್ಲಿ ಇಂದು ದಿನ ಭಕ್ತರು ನೆಲ್ಲಿಕಾಯಿ ಇಂದ ಒಬ್ಬರನ್ನೊಬ್ಬರು ಹೊಡೆದುಕೊಳ್ಳುವ ಸೇವೆ ನಡೆಯುತ್ತಿತ್ತು ಎಂದು ಈ ಊರಿನ ಹಿರಿಯರು ಹೇಳುತ್ತಾರೆ. ಅಪಾರ ಮಹಿಮೆ ಉಳ್ಳ ಸದಾಶಿವ ಗೆ ನಿತ್ಯವೂ ರುದ್ರಾಭಿಷೇಕ ಸಹಿತ ಮಂಗಳಾರತಿ ಪೂಜೆ ನಡೆಯುತ್ತದೆ. ವಿಶೇಷ ದಿನಗಳಲ್ಲಿ ಸ್ವಾಮಿಗೆ ಬಂಗಾರದ ಕವಚ ತೊಡಿಸಿ ಪೂಜೆಯನ್ನು ಮಾಡಲಾಗುತ್ತದೆ. ತನ್ನ ಬಳಿ ಯಾರೇ ಬಂದು ಏನನ್ನೇ ಬೇಡಿದರೂ ಇಲ್ಲ ಎನ್ನದೆ ವರವನ್ನು ನೀಡುವ ಸದಾಶಿವ ಸ್ವಾಮಿಯ ಈ ಆಲಯವು ಬೆಳಗ್ಗೆ 7 ರಿಂದ 8.30 ರ ವರೆಗೆ ಮಾತ್ರ ತೆರೆದಿರುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಏಕ ದಶ ರುದ್ರ, ಸರ್ವಭರಣ ಪೂಜೆ, ಪಾರಾಯಣ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ದೇವರಲ್ಲಿ ಪ್ರಸಾದ ಕೇಳುವವರು ಹಾಗೆ ದೇವರಿಗೆ ಪೂಜೆ ಸಲ್ಲಿಸುವವರು ಒಂದು ದಿನ ಮುಂಚಿತವಾಗಿ ದೇವಾಲಯದ ಅರ್ಚಕರ ದೂರವಾಣಿ ಸಂಖ್ಯೆ ಆದ 9480718912- 9480356275 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ಬೇರೆ ಯಾವ ಸ್ಥಳಕ್ಕೂ ಹೋಗದೇ ಸಾಕ್ಷಾತ್ ಪರಮೇಶ್ವರನು ಇಷ್ಟ ಪಟ್ಟು ಲಿಂಗ ರೂಪಿಯಾಗಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸದಾಶಿವಳ್ಳಿ ಎಂಬ ಊರಿನಲ್ಲಿ ಇದೆ. ಈ ಪುಣ್ಯ ಕ್ಷೇತ್ರವೂ ಶಿರಸಿಯಿಂದ ಕೇವಲ 8 ಕಿಮೀ ದೂರದಲ್ಲಿದೆ. ಶಿರಸಿಗೆ ರಾಜ್ಯದ ಹಲವಾರು ಭಾಗಗಳಿಂದ ಬಸ್ ಸೌಲಭ್ಯ ಇದ್ದು ಶಿರಸಿ ಇಂದ ಬಾಡಿಗೆ ವಾಹನದ ಮುಖಾಂತರ ಸುಲಭವಾಗಿ ತಲುಪಬಹುದು. ಪ್ರಶಾಂತವಾದ ವಾತಾವರಣದಲ್ಲಿ ಇರುವ ಈ ಕ್ಷೇತ್ರಕ್ಕೆ ಬಂದರೆ ಮನಸಿನ ದುಗುಡ ಎಲ್ಲಾ ದೂರವಾಗಿ ತನ್ಮಯತೆ ಕೂಡಿದಂತೆ ಆಗುತ್ತೆ. ಶುಭದಿನ.