WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಹಚ್ಚ ಹಸುರಿನ ಪ್ರಕೃತಿಯನ್ನು ನೋಡೋದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಒತ್ತಡದ ಬದುಕಿನ ಮಧ್ಯದಲ್ಲಿ ಯಾವುದಾದರೂ ಸುಂದರವಾದ ತಾಣಕ್ಕೆ ಭೇಟಿ ನೀಡಿ ಬಂದ್ರೆ ಮನಸ್ಸು ಹಗುರ ಆಗುತ್ತೆ. ಜೊತೆಗೆ ಬದುಕಿಗೆ ಹೊಸ ಚೈತನ್ಯ ತುಂಬಿದ ಹಾಗಾಗುತ್ತೆ. ಬನ್ನಿ ಇವತ್ತಿನ ಲೇಖನದಲ್ಲಿ ಪ್ರವಾಸದ ಜೊತೆಗೆ ಧಾರ್ಮಿಕವಾಗಿಯು ಪ್ರಸಿದ್ಧಿ ಪಡೆದ ಸಿತಾಳಯ್ಯನ ಗಿರಿಯ ಸಿತಾಳ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಾನ ಹಾಗೂ ಅದರ ಸುತ್ತ ಮುತ್ತಲಿನ ಪರಿಸರ ವನ್ನಾ ಕಣ್ಣು ತುಂಬಿಕೊಂಡು ಬರೋಣ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಜಗದ್ ವಿಕ್ಯಾತ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿತಾಳಯ್ಯನಗಿರಿ ಎಂಬ ಪಸಿದ್ದ ತಾಣ ಇದ್ದು, ಪ್ರಕೃತಿಯ ರುದ್ರರಮಣೀಯ ಈ ಗಿರಿಯ ಮೇಲೆ ಪುರಾಣ ಪ್ರಸಿದ್ಧವಾದ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಸಿತಾಳಯ್ಯನಗಿರಿ ಮಠವಿದೆ. ಸುಮಾರು 5000 ಅಡಿಗಳಷ್ಟು ಎತ್ತರವಿರುವ ಸಿತಾಳಯ್ಯನಗಿರಿ ಪ್ರಮುಖ ಆಕರ್ಷಣೆ ಆಗಿರುವ ಸೀತಾಳ ಮಲ್ಲಿಕಾರ್ಜುನ ದೇಗುಲವು ಗೋಪುರ, ಪ್ರದಕ್ಷಿಣಾ ಪಥ, ಹಾಗೂ ಗರ್ಭಗೃಹವನ್ನು ಒಳಗೊಂಡಿದೆ. ಈ ಕ್ಷೇತ್ರದ ವಿಶೇಷತೆ ಏನೆಂದರೆ ಇಲ್ಲಿರುವ ಶಿವ ಲಿಂಗವು ಸದಾ ನೀರಿನಿಂದ ಆವೃತ ಆಗಿದೆ ಎನ್ನುವುದು. ಅಲ್ಲದೇ ಸೀತಾ ಎಂದರೆ ಕನ್ನಡದಲ್ಲಿ ಒದ್ದೆ ಎಂಬ ಅರ್ಥವಿದ್ದು. ಇಲ್ಲಿನ ಶಿವ ಲಿಂಗವು ಸದಾ ಒದ್ದೆಯಾಗಿ ಇರುವ ಕಾರಣ ಇಲ್ಲಿ ನೆಲೆಸಿರುವ ಪರಮಾತ್ಮನನ್ನು ಸೀತಾಳ ಮಲ್ಲಿಕಾರ್ಜುನ ಸ್ವಾಮಿ ಎಂದು ಕರ್ಯಲಾಗುತ್ತದೆ.

ಮುಳ್ಳಯ್ಯನಗಿರಿ ಗೆ ಹೋಗುವ ಮೊದಲು ಈ ದೇವನನ್ನು ದರ್ಶನ ಮಾಡಿ ಹೋಗಬೇಕು ಎನ್ನುವ ಪ್ರತೀತಿ ಇದ್ದು, ಸಾಕಷ್ಟು ಜನ ಪ್ರವಾಸಿಗರು ಮುಳ್ಳಯ್ಯನಗಿರಿ ಹತ್ತುವ ಮೊದಲು ಈ ಆಳಾಯಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು ಚಾರಣವನ್ನು ಪ್ರಾರಂಭ ಮಾಡುತ್ತಾರೆ. ಇನ್ನೂ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹತ್ತಿರ ಪುರಾತನ ಕಾಲದ ಗುಹೆ ಒಂದಿದ್ದು, ಹಿಂದಿನ ಕಾಲದಲ್ಲಿ ಸಿದ್ಧಿ ಪುರುಷರು ಈ ಗುಹೆಯ ಮೂಲಕ ಮುಳ್ಳಯ್ಯನಗಿರಿ ತಲುಪುತ್ತಿದ್ದರು ಎಂಬ ಮಾತಿದೆ. ಮಳೆಗಾಲ, ಚಳಿಗಾಲ ಸಮಯದಲ್ಲಿ ಸಿತಾಳಯ್ಯನಗಿರಿ ನ ಕಣ್ಣು ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸಿ ಪ್ರಕೃತಿ ಸೌಂದರ್ಯ ಸವಿಯುವುದು ಜೊತೆಗೆ ಸೀತಾಳ ಮಲ್ಲಿಕಾರ್ಜುನ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಆಲಯದ ಗರ್ಭ ಗುಡಿಯಲ್ಲಿ ನಾವು ಎರಡು ಶಿವ ಲಿಂಗವನ್ನು ನೋಡಬಹುದು, ಶಿವನ ಮುಂದೆ ಎರಡು ನಂದಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಸೀತಾಳ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವ ವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ಚಿಕ್ಕಮಗಳೂರು, ಜಕ್ಕನ ಹಳ್ಳಿ, ತಳ್ಳಿ ಗೊಂಡ, ಕಬ್ಬಿನ ಹಳ್ಳಿ, ಉಳುವತ್ತಿ, ನರಗಣ ಹಳ್ಳಿ ಹಿರೆ ಕೊಳಲೆ, ಮೂರೂರು, ಮಾತ್ರವಲ್ಲದೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ.

ಸೋಮವಾರ ವಿಶೇಷ ಪೂಜೆ ಮಾಡುವ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ಗೆ ಶ್ರಾವಣ ಮಾಸ, ಕಾರ್ತಿಕ ಮಾಸ ಮತ್ತು ಶಿವರಾತ್ರಿಯಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇನ್ನೂ ಇಲ್ಲಿನ ಪ್ರಾಕೃತಿಕ ಸೌಂದರ್ಯ ವನ್ನಾ ಸವಿಯುವುದಕ್ಕೆ ಅಂತಾನೆ ನಿತ್ಯ ನೂರಾರು ಜನ ಪ್ರವಾಸಿಗರು ಈ ಗಿರಿಗೆ ಭೇಟಿ ನೀಡುತ್ತಾರೆ. ಚಳಿಗಾಲದ ಸಮಯದಲ್ಲಿ ಮಂಜಿನಿಂದ ಆವರಿಸಿರುವ ಈ ಗಿರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿದೆ. ಸಿತಾಳಯ್ಯನಗಿರೀ ಇಂದ ಮುಳ್ಳಯ್ಯನಗಿರಿಗೆ ಚಾರಣವನ್ನು ಕೈಗೊಳ್ಳಬಹುದು. ಚಾರಣಗಾರರು ಮುಳ್ಳಯ್ಯನಗಿರಿಗೆ ಹೆಚ್ಚಾಗಿ ಸೀತಾಳಯ್ಯನಗಿರಿ ಮೂಲಕವೇ ಸಾಗುತ್ತಾರೆ. ಗರ್ಭ ಗುಡಿಯಲ್ಲಿ ಮಂದಸ್ಮಿತ ಆಗಿ ಕುಳಿತು ಬೇಡಿ ಬಂದ ಭಕ್ತರನ್ನ ಹರಸುತ್ತಿದ್ದನೇ. ಈ ದೇವನನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಭಕ್ತಾಧಿಗಳು ತಮ್ಮ ಇಷ್ಟಾನುಸಾರ ಪೂಜೆಯನ್ನು ಸಲ್ಲಿಸಬಹುದು. ಈ ದೇವಾಲಯವು ಚಿಕ್ಕಮಗಳೂರು ಜಿಲ್ಲೆಯ ಸಿತಾಳಯ್ಯನಗಿರಿಯ ಮೇಲಿದ್ದು, ಈ ದೇಗುಲವು ಬೆಂಗಳೂರಿನಿಂದ 260 ಕಿಮೀ, ಹಾಸನದಿಂದ 79 ಕಿಮೀ, ಚಿಕ್ಕಮಗಳೂರಿನಿಂದ 19 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಈ ದೇವನ ಸನ್ನಿಧಾನಕ್ಕೆ ಬಂದು ಆತನ ಕೃಪೆಗೆ ಪಾತ್ರರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *