WhatsApp Group Join Now

ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತ ದೇಶವು ಮುಕ್ಕೋಟಿ ದೇವರುಗಳನ್ನು ಪೂಜಿಸುವ ಪುಣ್ಯ ಭೂಮಿ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಭಗವಂತನು ಅವತರಿಸಿದ ದಿವ್ಯ ಭೂಮಿ ಇದು. ನಮ್ಮ ದೇಶದಲ್ಲಿ ಎಲ್ಲಾ ದೇವರುಗಳಿಗೆ ಬಗೆ ಬಗೆಯ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅದ್ರಲ್ಲೂ ಶ್ರೀರಾಮಚಂದ್ರನು ಹೆಜ್ಜೆ ಇಟ್ಟು ಕಡೆಯೆಲ್ಲಾ ಒಂದೊಂದು ದೇಗುಲವನ್ನು ಕಟ್ಟಲಾಗಿದೆ ಎಂದ್ರೆ ಅತಿಶಯೋಕ್ತಿ ಅಲ್ಲ. ಈ ಕ್ಷೇತ್ರಕ್ಕೆ ಹೋದರೆ ಶ್ರೀರಾಮಚಂದ್ರನ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಅಂತೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಆ ದೇವಾಲಯ ಯಾವುದು ಅಲ್ಲಿನ ಮಹಿಮೆ ಏನು ಎನ್ನುವುದನ್ನು ತಿಳಿದುಕೊಂಡು ಬರೋಣ. ದಕ್ಷಿಣ ಭಾರತದ ಅಯೋಧ್ಯೆ ಎಂದು ಕರೆಯುವ ಕನ್ಯಾಡಿಯ ಶ್ರೀರಾಮ ಕ್ಷೇತ್ರ ನೇತ್ರಾವತಿ ನದಿಯ ಸಮೀಪದಲ್ಲಿರುವ ಪುಣ್ಯ ಕ್ಷೇತ್ರವಾಗಿದೆ. ಈ ಆಲಯವನ್ನು ಸಂಪೂರ್ಣವಾಗಿ ದಕ್ಷಿಣೋತ್ತರ ಶಿಲ್ಪ ಕಲೆಯಲ್ಲಿ ನಿರ್ಮಿಸಲಾಗಿದೆ. ಬೃಹದಾಕಾರದ ಆನೆಗಳು ದೇಗುಲಕ್ಕೆ ನಮ್ಮನ್ನು ಸ್ವಾಗತ ಕೋರಿದರೆ, ಕೆಂಪು ಮತ್ತು ಬಂಗಾರ ವರ್ಣದಿಂದ ಲೇಪಿತವಾದ ಇಲ್ಲಿನ ಗೋಪುರಗಳು ನಮ್ಮ ಕಣ್ ಮನವನ್ನು ತಣಿಸುತ್ತದೆ. ಈ ಕ್ಷೇತ್ರವು ಮೂರು ಅಂಥಸ್ತುಗಳಿಂದ ಕೂಡಿದ್ದು, ಆಲಯದ ಒಳಗೇ ವಿಶಾಲವಾದ ಪ್ರದಕ್ಷಿಣಾ ಪಥ, ಸುಂದರವಾದ ಗರ್ಬಹೃಹ ಇವೆ.

ದೇಗುಲದ ಹಿರ ಭಿತ್ತಿಗಳಲ್ಲಿ ರಾಮಾಯಣದ ಕೆತ್ತನೆಗಳನ್ನು ಕಾಣಬಹುದು. ಲಕ್ಷ್ಮೀ ಸ್ವರಸ್ವತಿ ಸೇರಿದಂತೆ ಇನ್ನೂ ಹಲವಾರು ವಿಗ್ರಹಗಳನ್ನು ಕೂಡ ಇಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ದೇಗುಲದ ಮುಖ್ಯ ಗರ್ಭ ಗುಡಿಯಲ್ಲಿ ಶ್ರೀರಾಮಚಂದ್ರ ಪ್ರಭು ಸೀತಾ ಮಾತೆ ಹಾಗೂ ಆಂಜನೇಯ ಸಮೇತನಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಈ ಕ್ಷೇತ್ರಕ್ಕೆ ಬಂದರೆ 36 ಬಗೆಯ ದೇವರುಗಳನ್ನು ಒಟ್ಟಿಗೆ ಕಣ್ಣು ತುಂಬಿಕೊಳ್ಳಬಹುದು. ಇಲ್ಲಿ ನವ ದುರ್ಗೆಯರು, ಶಿರಡಿ ಸಾಯಿಬಾಬಾ, ಬ್ರಹ್ಮ, ಶ್ರೀ ನಾರಾಯಣ, ನವ ಗ್ರಹ, ನಾಗ ಕ್ಷೇತ್ರ, ಅತಿ ಎತ್ತರದ ಬೆಳ್ಳಿಯ ರಥಗಳನ್ನು ನೋಡಬಹುದು. ದೇಗುಲದ ಒಳಗೆ ಕೇಳುವ ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ ಎನ್ನುವ ಶ್ಲೋಕವು ಮನಸಿಗೆ ಆನಂದವನ್ನು ಉಂಟು ಮಾಡುತ್ತದೆ. ಇನ್ನೂ ಶ್ರೀ ರಾಮ ಚಂದ್ರ ಪ್ರಭು ವನವಾಸದ ಸಮಯದಲ್ಲಿ ಈ ಸ್ಥಳಕ್ಕೆ ಬಂದಿದ್ದನು ಎಂಬ ಪ್ರತೀತಿ ಇದ್ದು, ಈ ಆಲಯವು ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ಪರಮ ಶಿಷ್ಯರಾಗಿದ್ದ ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಕಟ್ಟಿಸಿದರು ಎಂದು ಹೇಳಲಾಗುತ್ತದೆ. ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿದ್ದ ಶ್ರೀ ನಿತ್ಯಾನಂದ ಸ್ವಾಮೀಜಿ ಅವರು ಧರ್ಮಸ್ಥಳದ ಯಾತ್ರೆಯ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದು ಇಂದು ದಿನ ಇಲ್ಲಿ ತಂಗಿದ್ದರಂತೆ.

ಆಗ ಅವರಿಗೆ ಕನಸಿನಲ್ಲಿ ಶ್ರೀರಾಮನು ಬಂದು ನನಗೆ ಈ ಸ್ಥಳದಲ್ಲಿ ದೇಗುಲವನ್ನು ನಿರ್ಮಾಣ ಮಾಡಿ ಎಂದು ಹೇಳಿದಂತೆ ಭಾಸ ಆಯಿತು ಆಗ ಅವರು ಈ ವಿಷಯವನ್ನು ತನ್ನ ಶಿಷ್ಯನಾದ ಶ್ರೀ ಆತ್ಮಾನಂದ ಸರಸ್ವತಿ ಅವರಲ್ಲಿ ಹೇಳಿ ಈ ಸುಂದರವಾದ ದೇಗುಲವನ್ನು ನಿರ್ಮಿಸಲು ಕಾರಣಕರ್ತ ಆದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. 2007 ರಲ್ಲೀ ಈ ಕ್ಷೇತ್ರದ ಬ್ರಹ್ಮ ರಥೋತ್ಸವವನ್ನಾ ಅದ್ಧೂರಿಯಾಗಿ 54 ದಿನಗಳ ಕಾಲ ನಡೆಸಲಾಯಿತು. ಈ ಸಮಯದಲ್ಲಿ ದೇಶದ ನಾನಾ ಭಾಗಗಳಿಂದ ರಾಮ ಭಕ್ತರು ಇಲ್ಲಿಗೆ ಭೇಟಿ ನೀಡಿ ಸ್ವಾಮಿಯ ಸೇವೆಯನ್ನು ಮಾಡಿ ಕೃತಾರ್ಥ ಆಗಿದ್ದರೆ. ಇನ್ನೂ ಪ್ರತಿ ವರ್ಷ ಶ್ರೀರಾಮ ನವಮಿಯಂದು ಈ ಕ್ಷೇತ್ರದಲ್ಲಿ ವಿಧಿವತ್ತಾಗಿ ಆಚರಿಸಲಾಗುತ್ತದೆ. ಆ ಸಮಯದಲ್ಲಿ ಶ್ರೀರಾಮ ನಾಮ ಸಪ್ತಾಹ, ಅಹೋರಾತ್ರಿ ಭಜನೆ, ಹಾಗಿ ಶ್ರೀರಾಮ ದೇವರ ಜಾತ್ರಾ ಮಹೋತ್ಸವವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ದೀಪಾಲಂಕರದಿಂದ ಅಲಂಕೃತವಾದ ಈ ಭವ್ಯ ಮಂದಿರವನ್ನು ನೋಡೋದೇ ಕಣ್ಣಿಗೊಂದು ಹಬ್ಬವಾಗಿದೆ. ಸಾಕ್ಷಾತ್ ಶ್ರೀರಾಮಚಂದ್ರ ನಡೆದಾಡಿದ ಸ್ಥಳದಲ್ಲಿ ನಿರ್ಮಿತವಾದ ಈ ಆಲಯಕ್ಕ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ಪೂಜೆಯನ್ನು ದೇವರಿಗೆ ಮಾಡಿಸಬಹುದು. ಈ ಪುಣ್ಯ ಕ್ಷೇತ್ರವೂ ಧರ್ಮಸ್ಥಳದ ಸಮೀಪದ ನಿತ್ಯಾನಂದ ನಗರದಲ್ಲಿ ನಿರ್ಮಿತ ಆಗಿದೆ. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆ ಈ ಭವ್ಯ ಮಂದಿರಕ್ಕೆ ಭೇಟಿ ನೀಡಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *