WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವನ ಲಿಂಗವನ್ನು ಪ್ರತಿಷ್ಠಾಪಿಸಿರು ವುದನ್ನು ನೋಡಿಯೇ ಇರ್ತೀವಿ. ಆದರೆ ಈ ಶಿವನ ಆಲಯದಲ್ಲಿ ಶಿವನು ಶ್ರೀ ಚಕ್ರ ದಾರಿಯಾಗಿ ನೆಲೆಸಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಎಲ್ಲಾ ಮನೋ ಕಾಮನೆಗಳನ್ನು ಶ್ರೀಘ್ರವಾಗಿ ನೆರವೇರಿಸುವ ಶ್ರೀ ಚಕ್ರ ಸಮೇತನಾಗಿ ನೆಲೆಸಿರುವ ಶಿವನ ಅಪರೂಪದ ಪುಣ್ಯ ಕ್ಷೇತ್ರವನ್ನು ದರ್ಶನ ಮಾಡಿ ಬರೋಣ. ಅತ್ಯಂತ ವಿಶಾಲವಾದ ಪ್ರದೇಶದಲ್ಲಿ ನಿರ್ಮಿತ ಆಗಿರುವ ವಿಜಯಪುರದ ಶ್ರೀ ಸುಂದರೇಶ್ವರ ದೇವಾಲಯವು ಸುಮಾರು 800 ವರ್ಷಗಳಷ್ಟು ಪುರಾತನವಾದ ದೇವಾಲಯ ಆಗಿದ್ದು, ಇಲ್ಲಿ ಪರಮೇಶ್ವರನು ಶ್ರೀ ಚಕ್ರ ದಾರಿಯಾಗಿ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಸುತ್ತಿದ್ದಾನೆ. ಹಿಂದೂ ಮುಸ್ಲಿಂ ವಾಸ್ತು ಶೈಲಿಯಲ್ಲಿ ನಿರ್ಮಿತವಾದ ಈ ದೇಗುಲವು ಗರ್ಭ ಗೃಹ, ಪ್ರಾಂಗಣ, ದ್ವಜ ಸ್ತಂಭವನ್ನು ಒಳಗೊಂಡಿದೆ. ಇಲ್ಲಿನ ಶಿವ ಲಿಂಗದ ಮೇಲೆ ಶ್ರೀ ಚಕ್ರ ಇರುವುದರಿಂದ ಇದೊಂದು ಅತ್ಯಂತ ಜಾಗೃತ ಕ್ಷೇತ್ರ ಆಗಿದ್ದು, ಇಲ್ಲಿರುವ ಶ್ರೀ ಚಕ್ರಂಕಿತ ಲಿಂಗವನ್ನು ಆದಿ ಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಈ ಕ್ಷೇತ್ರಕ್ಕೆ ಬಂದು ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತರೆ, ಸಕಲ ಕಷ್ಟಗಳು ಪರಿಹಾರ ಆಗುತ್ತೆ ಎಂದು ಹೇಳಲಾಗುತ್ತದೆ.

ಈ ದೇವನ ಕರುಣೆಯಿಂದ ಮದುವೆ ಇಲ್ಲದೆ ಕೊರಗುತ್ತಿರುವವರು ಮದುವೆಯ ಭಾಗ್ಯವನ್ನು ಕಂಡಿದ್ದಾರೆ. ಮಕ್ಕಳು ಇಲ್ಲದ ದಂಪತಿಗಳಿಗೆ ಮಕ್ಕಳಾಗಿ ದೇ. ಆರ್ಥಿಕ ಸಮಸ್ಯೆ ಇಂದ ಬಳಲುವವರು ಆರ್ಥಿಕ ಚೇತರಿಕೆ ಕಂಡಿದ್ದಾರೆ. ಅಲ್ಲದೆ, ಅಂದುಕೊಂಡ ಕೆಲಸಗಳು ಆಗದೇ ತೊಂದರೆ ಅನುಭವಿಸುವವರು ಕೂಡ ಇಲ್ಲಿಗೆ ಬಂದು ಸುಂದರೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ತಮ್ಮ ಕಾರ್ಯದಲ್ಲಿ ಯಶಸ್ಸು ಪಡೆದಿದ್ದಾರೆ. ಹೀಗೆ ಹಲವಾರು ಜನರ ಕಷ್ಟವನ್ನು ಪರಿಹರಿಸುವ ಈ ದೇವನಿಗೆ ವಿಜಯಪುರ ಮಾತ್ರವಲ್ಲದೆ ಕೊಪ್ಪಳ, ಕಲಬುರ್ಗಿ, ರಾಯಚೂರು ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ದಿಂದಾ ಕೂಡ ಭಕ್ತರು ಆಗಮಿಸಿ ದೇವನಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಇನ್ನೂ ಐದು ವಾರಗಳ ಕಾಲ ಈ ಆಲಯಕ್ಕೆ ಬಂದು ಸುಂದರೇಷ್ವರ ನಿಗೆ ಪೂಜೆಯನ್ನು ಸಲ್ಲಿಸಿದರೆ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಸಾಕಷ್ಟು ಜನರು ಬರೀ ಕಾಲಿನಲ್ಲಿ ಬಂದು ದೇವರ ದರ್ಶನ ಮಾಡುವುದಾಗಿ ಹರಕೆ ಹೊರುತ್ತಾರೆ. ಇಲ್ಲಿನ ಶುವ ಲಿಂಗದ ಮೇಲೆ ಶ್ರೀ ಚಕ್ರ ಇರುವುದರಿಂದ ಇದನ್ನು ಶಿವ ಶಕ್ತಿಯ ಸಂಗಮ ಕ್ಷೇತ್ರ ಎಂದು ಬಣ್ಣಿಸಲಾಗಿದೆ. ಪ್ರತಿ ವರ್ಷ ಕಾಶಿ ಇಂದ ಸಾಧು ಸಂತರು ಆಗಮಿಸಿ ಈ ದೇವನಿಗೆ ಪೂಜೆಯನ್ನು ಸಲ್ಲಿಸುವುದು ಈ ಕ್ಷೇತ್ರದ ವಿಶೇಷತೆ ಆಗಿದೆ.

ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಪ್ರತಿ ವರ್ಷವೂ ಶಿವರಾತ್ರಿ ನ ತುಂಬಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಶಿವರಾತ್ರಿ ಯಂದೂ ಬೆಳಗಿನ ಜಾವ 4 ಗಂಟೆಯಿಂದ ದೇವರಿಗೆ ಅಭಿಷೇಕ ಮಾಡಲು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ದಿಂದಾ ಬೆಳಗುವ ಈ ದೇಗುಲವನ್ನು ನೋಡುವುದು ಕಣ್ಣಿಗೊಂದು ಹಬ್ಬವಾಗಿದೆ. ಅಲ್ಲದೆ ಕಾರ್ತಿಕ ಮಾಸದಲ್ಲಿ ಪ್ರತಿ ದಿನವೂ ದೇವರಿಗೆ ಒಂದೊಂದು ಬಗೆಯ ಅಲಂಕಾರ ಮಾಡಲಾಗುತ್ತದೆ. ಅಲ್ಲದೆ ಕಾರ್ತಿಕ ಮಾಸದಲ್ಲಿ ನವ ಧಾನ್ಯದ ಅಲಂಕಾರ ಮಾಡಿಸುವವವ್ರಿಗೆ ನವಗ್ರಹ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಶ್ರೀ ಚಕ್ರಾಂಕಿತ ಸಹಿತನಾಗಿ ನೆಲೆಸಿರುವ ಇಲ್ಲಿನ ಸುಂದರೇಶ್ವರ ದೇವರಿಗೆ ನಿತ್ಯವೂ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ಸೋಮವಾರ ಎಲೆ ಪೂಜೆ, ರುದ್ರಾಭಿಷೇಕ ಗಳನ್ನ ನೆರವೇರಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 7 ರಿಂದ ರಾತ್ರಿ 9 ರ ವರೆಗೆ ಶ್ರೀ ಸುಂದರೇಶ್ವರ ದೇವರನ್ನು ಕಣ್ಣು ತುಂಬಿಕೊಳ್ಳಬಹುದು. ಅನೇಕ ಮಹಿಮೆಗಳಿಗೆ ಕಾರಣ ಆದ ಸುಂದರೇಶ್ವರ ದೇಗುಲವು ವಿಜಯಪುರ ಜಿಲ್ಲೆಯಲ್ಲಿ ಇದೆ. ಈ ದೇಗುಲವನ್ನು ಬೆಂಗಳೂರಿನಿಂದ 521 ಕಿಮೀ, ರಾಯಚೂರಿನ ನಿಂದಾ 223 ಕಿಮೀ, ಹಬ್ಬಲ್ಲಿಯಿಂದ 133 ಕಿಮೀ, ವಿಜಯಪುರ ಬಸ್ ನಿಲ್ದಾಣದಿಂದ 2.5 ದೂರದಲ್ಲಿದೆ. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಶಿವನ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *