ನಮಸ್ತೆ ಪ್ರಿಯ ಓದುಗರೇ, ಭೂಮಿ ಮೇಲೆ ದಶ ಅವತಾರವನ್ನು ತಾಳಿ ಜನರ ತಪ್ಪು ಒಪ್ಪುಗಳನ್ನು ಮನ್ನಿಸಿ ಭಕ್ತರ ಅಭಿಷ್ಟೇಗಳನ್ನು ಈಡೆರಿಸು ವುದಕ್ಕೆ ಅಂತಾನೆ ಮಹಾ ವಿಷ್ಣುವು ಅನೇಕ ಸ್ಥಳಗಳಲ್ಲಿ ತನ್ನ ದಿವ್ಯ ಅಂಶವನ್ನು ಹೊತ್ತು ಭಕ್ತರನ್ನು ಸಲಹುತ್ತಿದ್ದನೆ. ಸಾಮಾನ್ಯವಾಗಿ ವೆಂಕಟೇಶ್ವರ ಸ್ವಾಮಿಯ ಹೆಸರನ್ನು ನೆನಪು ಮಾಡಿಕೊಂಡ ತಕ್ಷಣ ನಮಗೆ ನೆನಪಿಗೆ ಬರುವುದೇ ತಿರುಪತಿ. ಆದ್ರೆ ತಿರುಪತಿ ಮಾತ್ರವಲ್ಲ ಈ ಸ್ಥಳದಲ್ಲಿ ಕೂಡ ಮಹಾ ವಿಷ್ಣುವು ವೆಂಕಟೇಶ್ವರನಾಗಿ ನೆಲೆ ನಿಂತು ತನ್ನ ಬಳಿ ಬೇಡಿ ಬಂದ ಭಕ್ತರ ನ್ನೂ ಸಲಾಹುತ್ತಿದ್ದನೆ. ಅಲ್ಲದೆ ಈ ಕ್ಷೇತ್ರದಲ್ಲಿ ದೇವರಿಗೆ ಅಭಿಷೇಕ ಮಾಡುವ ಸಮಯದಲ್ಲಿ ಮಹಾ ವಿಸ್ಮಯ ಒಂದು ಜರುಗುತ್ತದೆ. ಇಷ್ಟಕ್ಕೂ ಆ ದೇವಾಲಯ ಎಲ್ಲಿದೆ? ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಹಿಕ್ಕಲು ಬೆಟ್ಟ, ಕೂರ್ಮಾಗಿರಿ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಕಲ್ಲು ಬಂಡೆಗಳಿಂದ ಪ್ರಕೃತಿ ಸುಂದರ ದೃಶ್ಯದಿಂದ ಕೂಡಿರುವ ಹಿಕ್ಕಲು ಬೆಟ್ಟದ ಮೇಲೆ ಪುರಾತನವಾದ ವೆಂಕಟೇಶ್ವರನ ಮೂರ್ತಿ ಇದ್ದು, ಇಲ್ಲಿ ನೆಲೆಸಿರುವ ವೆಂಕಟೇಶ್ವರ ಸ್ವಾಮಿಯನ್ನು ಹಿಕ್ಕಲಪ್ಪ ಎಂದು ಹೇಳಲಾಗುತ್ತದೆ. ಹಿಕ್ಕಲು ಬೆಟ್ಟವು ನೋಡಲು ಕೂರ್ಮ ಅಂದ್ರೆ ಆಮೆಯ ಆಕಾರದಲ್ಲಿ ಕಾಣುವುದರಿಂದ ಈ ಬೆಟ್ಟವನ್ನು ಕೂರ್ಮಗಿರಿ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಸ್ವಾಮಿಯು ಸ್ವಯಂಭೂ ಆಗಿ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ಪೋರೆಯುತ್ತಿದ್ದಾನೆ. ಇಲ್ಲಿ ಲಕ್ಷ್ಮೀ ದೇವಿ ಹಾಗೂ ಪದ್ಮಾವತಿ ದೇವಿಯರು ಕೂಡ ಸ್ವಯಂಭೂ ಆಗಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದು, ಈ ಆಲಯವು ಗರುಡ ಗಂಬ, ಪ್ರಾಂಗಣ, ಗೋಪುರ, ಹಾಗೂ ಸುಂದರವಾದ ಗರ್ಭಗೃಹವನ್ನಾ ಒಳಗೊಂಡಿದೆ.
ತಿರುಪತಿಯ ದೇವಸ್ಥಾನ ಮಂಡಳಿಯು ಈ ಕ್ಷೇತ್ರವನ್ನು ಮೂಲ ವೆಂಕಟೇಶ್ವರ ಸ್ವಾಮಿಯ 108 ಸ್ಥಳಗಳನ್ನು ಒಂದು ಎಂದು ಪರಿಗಣಿಸಿ ಇಲ್ಲಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವೊಂದನ್ನು ಪ್ರತಿಷ್ಠಾಪಿಸಿ ಪೂಜೆಗೆ ಅನುವು ಮಾಡಿಕೊಟ್ಟಿದೆ. ಯಾರೇ ಬಂದು ಏನನ್ನೇ ಬೇಡಿದರೂ ಇಲ್ಲಿ ನೆಲೆಸಿರುವ ಪರಮಾತ್ಮ ಇಲ್ಲ ಎನ್ನದೆ ಬಹು ಬೇಗನೆ ಭಕ್ತರ ಎಲ್ಲಾ ಕೋರಿಕೆಗಳನ್ನು ನೆರವೇರಿಸುತ್ತಾರೆ ಎನ್ನುವುದು ಈ ದೇವನನ್ನು ನಂಬಿದ ಭಕ್ತರ ಮನದ ಮಾತಾಗಿದೆ. ಇಲ್ಲಿಗೆ ಹೋದರೆ ದಯಾಮಯನಾದ ಭಗವಂತನ ಸಾನಿಧ್ಯದಲ್ಲಿ ಮನಸ್ಸು ಶಾಂತವಾಗಿ ಬದುಕಿನ ಜಂಜಾಟಗಳಿಂದ ಮುಖ್ತಿ ಪಡೆಯುತ್ತೆ. ಇನ್ನೂ ಈ ಕ್ಷೇತ್ರವನ್ನು ತಿರುಪತಿ ತಿಮ್ಮಪ್ಪನ ಮೂಲ ಸ್ಥಾನ ಎಂದು ಹೇಳಲಾಗುತ್ತದೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಮಹಾ ವಿಷ್ಣುವು ವೆಂಕಟೇಶ್ವರನ ಅವತಾರದಲ್ಲಿ ಇದ್ದಾಗ ಇಲ್ಲಿ ಕೆಲ ಕಾಲ ತಪಸ್ಸನ್ನು ಆಚರಿಸಿದನಂತೆ. ಹುತ್ತದ ಕೆಳಗಡೆ ಸ್ವಾಮಿಯು ತಪಸ್ಸು ಮಾಡುವಾಗ ನಿತ್ಯ ಆಕಳೊಂದು ಬಂದು ಹಾಲು ನೀಡಿ ಮನೆಗೆ ಹಿಂತಿರುಗಿ ಹೋಗುತ್ತಿತ್ತು. ಒಂದಿನ ಆಕಳು ಮಾಲಿಕನು ಈ ಆಕಳು ನಿತ್ಯವೂ ಯಾಕೆ ಹಾಲನ್ನು ನೀಡುತ್ತಿಲ್ಲ ಎಂದು ಕದ್ದು ಮುಚ್ಚಿ ಆಕಳನ್ನು ಅನುಸರಿಸಿ ಬಂದು ನೋಡಿದಾಗ, ಆಕಳು ಹುತ್ತವೊಂದಕ್ಕೆ ಹಾಲನ್ನು ಸುರಿಸುತ್ತಿರುವುದನ್ನು ಕಂಡು ಕೋಪದಿಂದ ಆಕಳಿಗೆ ಕೊಡಲಿಯಿಂದ ಹೊಡೆಯಲು ಮುಂದಾದಾಗ ಆ ಕೊಡಲಿಯ ಏಟು ತಪ್ಪಸನ್ನ್ನು ಆಚರಿಸುತ್ತಿದ್ದ ವೆಂಕಟೇಶ್ವರ ಸ್ವಾಮಿಯ ಮೇಲೆ ಬಿದ್ದಿತು ಎಂದು ನಂತರ ಸ್ವಾಮಿಯು ಇಲ್ಲಿ ಉದ್ಭವ ರೂಪದಲ್ಲಿ ನೆಲೆಸಿದನು ಎಂದು ಹೇಳಲಾಗುತ್ತದೆ.
ಇಂದಿಗೂ ಉದ್ಭವ ಮೂರ್ತಿಯು ಕೊಡಲಿಯಿಂದ ಪೆಟ್ಟು ಬಿದ್ದು ಭಿನ್ನವಾಗಿ ಇರುವುದನ್ನು ನಾವು ಕಾಣಬಹುದು. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಪ್ರತೀ ಶನಿವಾರ ಇಲ್ಲಿರುವ ಸ್ವಾಮಿಯ ಉದ್ಭವ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಆ ಸಮಯದಲ್ಲಿ ಮಹಾ ಅದ್ಭುತ ಈ ಕ್ಷೇತ್ರದಲ್ಲಿ ಜರುಗುತ್ತದೆ. ಇಲ್ಲಿನ ಅರ್ಚಕರು ಹೇಳುವಂತೆ ಉದ್ಭವ ಮೂರ್ತಿಗೆ ಪ್ರತಿ ಶನಿವಾರ ಹಾಲಿನ ಅಭಿಷೇಕ ಮಾಡಿದಾಗ ಹಾಲಿನ ಅಂಶವು ಉದ್ಭವ ಮೂರ್ತಿಯ ಒಳಗಡೆ ಹೋಗಿ ಹಾಲಿನಲ್ಲಿ ಇರುವ ನೀರಿನ ಅಂಶವು ಮೂರ್ತಿಯಿಂದ ಹೊರ ಬರುತ್ತದಂತೆ. ಈ ವಿಸ್ಮಯವನ್ನಾ ನೋಡೋಕೆ ಅಂತಾನೆ ಸಾಕಷ್ಟು ಜನ ಶನಿವಾರದಂದು ಈ ದೇಗುಲಕ್ಕೆ ಭೇಟಿ ನೀಡಿ ಪರಮಾತ್ಮನ ದಿವ್ಯ ರೂಪವನ್ನು ಕಣ್ಣು ತುಂಬಿಕೊಳ್ಳುತ್ತಾ ರೆ. ಪ್ರತಿ ಶನಿವಾರವೂ ಈ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ವೈಕುಂಠ ಏಕಾದಶಿ, ರಥಸಪ್ತಮಿ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿ ಕಲ್ಯಾಣೋತ್ಸವ ಹಾಗೂ ಜಾತ್ರೆಯನ್ನು ನಡೆಸಲಾಗುತ್ತದೆ. ಈ ದೇಗುಲವು ಶನಿವಾರ ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆ ವರೆಗೆ ತೆಗೆದಿರುತ್ತದೆ. ಪ್ರತಿ ಶನಿವಾರ ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಇದ್ದು, ಭಕ್ತಾದಿಗಳು ಅಭಿಷೇಕ ಸೇವೆ, ಅಲಂಕಾರ ಸೇವೆ, ತುಳಸಿ ಅರ್ಚನೆಗಳನ್ನು ಮಾಡಿಸಬಹುದು. ಈ ಪುಣ್ಯ ಕ್ಷೇತ್ರವೂ ತುಮಕೂರು ಜಿಲ್ಲೆಯ ಹಿಕ್ಕಲು ಬೆಟ್ಟದ ಮೇಲಿದೆ. ಸುಕ್ಷೇತ್ರ ಬೆಂಗಳೂರಿನಿಂದ 63 ಕಿಮೀ, ತುಮಕೂರಿನಿಂದ 19 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಭಗವಂತನ ದರ್ಶನ ಮಾಡಿ ಅವನ ಅನುಗ್ರಹ ಪಡೆಯಿರಿ. ಶುಭದಿನ.