WhatsApp Group Join Now

ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ವಿಜ್ಞಾನ ಪ್ರಾರಂಭವಾಗಿರುವುದು ಈಗಿನ ಕಾಲದಲ್ಲಿ ಅಲ್ಲಾ ಸಾವಿರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿ ವಿಜ್ಞಾನವನ್ನು ಕಂಡು ಹಿಡಿಯಲಾಗಿತ್ತು. ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳಲ್ಲಿ ಬಳಸಿರುವ ಟೆಕ್ನಾಲಜಿ ಇಂದಿಗೂ ಕೂಡ ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಚಂದ್ರಗುಪ್ತ ಮೌರ್ಯ ಸಮಯದಲ್ಲಿ ಭೂಮಂಡಲದಲ್ಲಿ ಏನೆಲ್ಲ ನಡೆಯುತ್ತಿದೆ, ಏನೆಲ್ಲ ನಡೆಯುತ್ತೆ, ಗ್ರಹಗಳು ಎಷ್ಟಿವೆ, ನಕ್ಷತ್ರಗಳು ಎಷ್ಟಿದೆ ಎಂಬುದರ ಎಲ್ಲ ಮಾಹಿತಿಯನ್ನು ಆಗಿನ ಕಾಲದಲ್ಲಿ ಪುಸ್ತಕದಲ್ಲಿ ಬರೆದಿದ್ದಾರೆ. ಇತಿಹಾಸದ ಪುಸ್ತಕ ತೆಗೆದು ನೋಡಿದರೆ ವಿಜ್ಞಾನ ಹುಟ್ಟಿದ್ದು ನಮ್ಮ ಭಾರತ ದೇಶದಲ್ಲಿ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತೆ. ನಮ್ಮ ಭಾರತ ದೇಶದಲ್ಲಿ ವಿಜ್ಞಾನ ಮತ್ತು ವಿಜ್ಞಾನಿಗಳು ಎಷ್ಟು ಬುದ್ಧಿವಂತರಿದ್ದಾರೆ ಎಂಬುದಕ್ಕೆ ನಡೆದ ಚಂದ್ರಯಾನ ಯಶಸ್ವಿ ಪ್ರಯೋಗ ಉತ್ತರ ಕೊಡುತ್ತೆ.

ಸ್ನೇಹಿತರೇ ಇವತ್ತು ನಾವು ಹೇಳಲು ಹೊರಟಿರುವ ಈ ದೇವಸ್ಥಾನದ ವಿಸ್ಮಯ ಮತ್ತು ನಿಗೂಢತೆಯನ್ನು ಬಹುಶಃ ಭೂಮಿ ಇರುವ ತನಕ ಯಾರು ಕೂಡ ಕಂಡುಹಿಡಿಯಲು ಸಾಧ್ಯವೇ ಇಲ್ಲ. ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವ ಎಷ್ಟೂ ವಿಜ್ಞಾನಿಗಳು ಮತ್ತೆ ಬೇರೆ ಯಾವ ಜಾಗಕ್ಕೂ ಭೇಟಿ ಕೊಟ್ಟಿಲ್ಲ. ಅಷ್ಟೊಂದು ಕುತೂಹಲ ನಿಗೂಢ ದೇವಸ್ಥಾನ ವಿದು. ಈ ದೇವಸ್ಥಾನವನ್ನು ತೇಲುವ ದೇವಸ್ಥಾನ ಮತ್ತು ಹಾರುವ ದೇವಸ್ಥಾನ ಅಂತ ಕರೆಯಲಾಗುತ್ತದೆ. ಈ ದೇವಸ್ಥಾನಕ್ಕೆ ಬಳಸಿರುವ ಕಲ್ಲುಗಳು ನೀರಿನಲ್ಲಿ ತೇಲುತ್ತದೆ ಯಾವುದೇ ಸಹಾಯವಿಲ್ಲದೆ ಭೂಮಿ ಮೇಲೆ ಅಂಟಿಕೊಳ್ಳುತ್ತೆ ಆಕಾಶದಲ್ಲಿ ಹಾರತ್ತದೆ. ಯಾವುದಪ್ಪ ಇದು ದೇವಸ್ಥಾನ ಅಂತ ಕೇಳ್ತಾ ಇದ್ದೀರಾ? ಈ ದೇವಸ್ಥಾನದ ಹೆಸರು ರಾಮಪ್ಪ ಟೆಂಪಲ್ ಪ್ರಪಂಚದ ಏಕೈಕ ಫ್ಲೈಟ್ ಟೆಂಪಲ್. ಈ ದೇವಸ್ಥಾನದ ವಿಳಾಸ. ತೆಲಂಗಾಣ ರಾಜ್ಯದ ಅತಿ ದೊಡ್ಡ ನಗರವಾದ ವರಂಗಲ್ ಗೆ ಹೋಗಬೇಕು.

ವರ್ಷಗಳಿಂದ 66 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಮುಳುಗು ಎಂಬ ಹಳ್ಳಿ ಸಿಗುತ್ತೆ ಇದೆ. ಹಳ್ಳಿಯಲ್ಲಿ ನೆಲೆಸಿರುವ ರಾಮಪ್ಪ ಟೆಂಪಲ್ ಈ ದೇವಸ್ಥಾನದ ವಿಕಿಪೀಡಿಯ ಮತ್ತು ಗೂಗಲ್‌ನ ಲೋಕೇಶನಲ್ಲಿದೆ ಒಂದು ಸಲ ಚೆಕ್ ಮಾಡಿ ಹೈದರಾಬಾದ್ನಿಂದ ಕೇವಲ 200 ಕಿಲೋಮೀಟರ್ ಪ್ರಯಾಣ ಮಾಡಿದರೆ ರಾಮಪ್ಪ ಟೆಂಪಲ್ ಸಿಗುತ್ತೆ. ಸ್ನೇಹಿತರೇ ಒಂದು ಸ್ಟಾಟಿಸ್ಟಿಕ್ಸ್ ಹೇಳಿರುವ ಪ್ರಕಾರ ರಾಮಪ್ಪ ಟೆಂಪಲ್ ಹೈದರಾಬಾದ್ ನಗರ ದಿಂದ ಶೇಕಡಾ 23% ಜನರು ಭೇಟಿ ಕೊಟ್ಟಿದ್ದಾರೆ.ಇತಿಹಾಸದಲ್ಲೇ ಮೊದಲ ಬಾರಿ ಒಂದು ನಗರದಿಂದ ಇಷ್ಟೊಂದು ಜನರು ದೇವಸ್ಥಾನಕ್ಕೆ ಭೇಟಿ ಕೊಟ್ಟಿರೋದು ರಾಮಪ್ಪ ದೇವಸ್ಥಾನವನ್ನು ರುದ್ರೇಶ್ವರ ದೇವಸ್ಥಾನ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ.

ಈ ದೇವಸ್ಥಾನ ದಲ್ಲಿ ನೆಲೆಸಿರುವುದು ಒಂಬತ್ತನೇ ಶತಮಾನದ ರುದ್ರ ಶಿವಲಿಂಗ ಪರಮಾತ್ಮ ಒಂಬತ್ತನೇ ಶತಮಾನದ ಈ ಶಿವಲಿಂಗಕ್ಕೆ ಹನ್ನೆರಡನೇ ಶತಮಾನದಲ್ಲಿ ದೇವಸ್ಥಾನ ವನ್ನು ನಿರ್ಮಾಣ ಮಾಡಲಾಗುತ್ತೆ. ಹನ್ನೆರಡನೇ ಶತಮಾನದಲ್ಲಿ ಆಂಧ್ರ ಪ್ರದೇಶ ಪ್ರಾಂತ್ಯವನ್ನು ಆಳುತ್ತಿದ್ದ ಸಾಮ್ರಾಜ್ಯದ ಗಣಪತಿದೇವ ರಾಜ ರಾಜರ ಆಸ್ಥಾನದಲ್ಲಿ ನೆಲೆಸಿದ್ದ ಶಿಲ್ಪ ಕಲೆಗಾರ ರಾಮಪ್ಪ ಈ ದೇವಸ್ಥಾನವನ್ನು ಕಟ್ಟುತ್ತಾನೆ. ಈ ದೇವಸ್ಥಾನವನ್ನು ನಿರ್ಮಾಣ ಮಾಡೋದಕ್ಕೆ ಬರೋ ಬ್ಬರಿ 22 ವರ್ಷಗಳ ಸಮಯ ಹಿಡಿಯಿತು ಎಂದು ಕಾಕತೀಯ ಸಾಮ್ರಾಜ್ಯ ಪುಸ್ತಕ ದಲ್ಲಿ ಹೇಳಲಾಗಿದೆ. ನೀವು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀವು ಕೂಡ ವಿಸ್ಮಯಗಳನ್ನು ತಿಳಿದುಕೊಳ್ಳಬಹುದು

WhatsApp Group Join Now

Leave a Reply

Your email address will not be published. Required fields are marked *