ಬರ ಪರಿಹಾರ ಹಣ ಬರದಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ರಾಜ್ಯ ಸರ್ಕಾರದಿಂದ ಈ ಹಿಂದೆ ಪ್ರತಿ ರೈತರ ಖಾತೆಗಳಿಗೆ 2000 ಹಣ ಹಾಕಲಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಪ್ರತಿ ಹೆಕ್ಟೇರ್ ಭೂಮಿಗೆ ಬಹುವಾರ್ಷಿಕ ಬೆಳೆಗಳಿಗೆ ₹22,500 ವಾರ್ಷಿಕ ಬೆಳೆಗಳಿಗೆ 18,000 ಬಳಿಯಾಶ್ರಿತ ಬೆಳೆಗಳಿಗೆ 8500 ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಆದರೆ, ಇನ್ನು ಕೂಡ ಬಹಳಷ್ಟು ರೈತರ ಖಾತೆಗಳಿಗೆ ಸಮರ್ಪಕವಾಗಿ ಹಣ ಜಮಾವಣೆಯಾಗಿಲ್ಲ ಮತ್ತು ಸಾಕಷ್ಟು ರೈತರ ಖಾತೆಗಳಿಗೆ ಹಣ ಬಂದಿಲ್ಲ.
ಹಾಗಿದ್ರೆ ಇಂತಹ ರೈತರು ಏನು ಮಾಡಬೇಕು? ಯಾವ ದಾಖಲಾತಿಗಳನ್ನ ಎಲ್ಲಿ ಸಲ್ಲಿಸಿದರೆ ಬರ ಪರಿಹಾರ ಹಣ ಪಡೆಯದೆ ಇರುವ ರೈತರಿಗೂ ಕೂಡ ಹಣ ಸಿಗುತ್ತೆ ಅಂತ ಕಂಪ್ಲೀಟ್ ಮಾಹಿತಿಯನ್ನ ನೀಡಲಾಗಿದೆ, 2023 ನೇ ಸಾಲಿನ ಮುಂಗಾರು ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಎಸ್ಡಿಆರ್ಎಫ್ ಅಥವಾ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಠ 2000 ರೂಪಾಯಿಗಳವರೆಗೆ ಪಾವತಿಸಿರುವ ಬೆಳೆ ಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಹತ್ತಿಯಂತೆ ಇನ್ನುಳಿದ ಬಾಕಿ ಬೆಳೆ ಹಾನಿ ಪರಿಹಾರ ಮೊತ್ತವನ್ನ ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರವು ಆದೇಶಿಸಿದೆ.
ಬೆಳೆ ಸಮೀಕ್ಷೆಯ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗಿದೆ. ಬಾಕಿ ಉಳಿದ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯ ಹಂತದಲ್ಲಿದ್ದು, ತುರ್ತಾಗಿ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ಅನುಮೋದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನ ನಾಡ ಕಚೇರಿಗಳು, ಗ್ರಾಮ ಪಂಚಾಯಿತಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಶೀಲ್ದಾರ ಕಚೇರಿಗಳಲ್ಲಿ ಪಟ್ಟಿ ಹಾಕಲಾಗಿದೆ ನೀವು ಅಲ್ಲಿ ಭೇಟಿ ನೀಡಿ ನೀವು ವಿಚಾರಣೆ ಮಾಡಬಹುದು ಆದರೆ.
ಕೆಲವೊಂದು ಇಷ್ಟು ಜಿಲ್ಲೆಗಳಲ್ಲಿ ಅಂದರೆ ಮುಖ್ಯವಾಗಿ ಕಲಬುರ್ಗಿಯಲ್ಲಿಒಂದೆರಡು ರೈತರಿಗೆ ತಮ್ಮ ಖಾತೆಯಲ್ಲಿ ಕೂಡಅವರ ಕೈಗೆ ಹಣ ಸಿಗುತ್ತಿಲ್ಲ ಇದು ಏಕೆಂದರೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಿಲ್ಲ ಎಂದ ಕಾರಣಕ್ಕಾಗಿ ಹಣವನ್ನು ತಡೆ ಹಿಡಿದಿದ್ದಾರೆ . ಇನ್ನು ನಿಮ್ಮ ಖಾತೆಗಳಿಗೆ ಬರ ಪರಿಹಾರ ಹಣ ಬಂದಿಲ್ಲವೆಂದರೆ ನಿಮ್ಮ ಫ್ರೂಟ್ ಐಡಿ ಇದೆಯೋ ಇಲ್ಲೋ ಎಂಬುದು ಒಮ್ಮೆ ಕಸಿತ ಪಡಿಸಿಕೊಳ್ಳಿ ಇದು ಕಡ್ಡಾಯವಾಗಿದೆ ಒಂದು ವೇಳೆ ಇಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಪಾಸ್ ಬುಕ್ ಪಹಣಿಯ ಮಾಹಿತಿ ಇವೆಲ್ಲವನ್ನು ತೆಗೆದುಕೊಂಡು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಭೇಟಿ ನೀಡಿ ನಿಮ್ಮ ಫ್ರೂಟ್ ಐಡಿಯನ್ನು ಒಮ್ಮೆ ಮಾಡಿಸಿಕೊಳ್ಳಿ.