ಜನರಿರುವ ಕರ್ನಾಟಕ ಸರ್ಕಾರ ಕೃಷಿ ಇಲಾಖೆಯಿಂದ ರೈತರಿಗೆ ಮತ್ತೊಮ್ಮೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಅಂದರೆ 2024 25 ನೇ ಸಾಲಿಗೆ ಹಲವಾರು ಯೋಜನೆಗಳಿಗೆ ಸಹಾಯಧನ ನೀಡಿಕೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಅಂತಂದ್ರೆ ಕೃಷಿ ಯಾಂತ್ರೀಕರಣ ಯೋಜನೆ, ಕೃಷಿ ಸಂಸ್ಕರಣೆ ಯೋಜನೆ, ಅಟಲ್ ಭೂಜಲ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಕೃಷಿ ಭಾಗ್ಯ ಯೋಜನೆಗಳ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನ ಮಾಡಿದ್ದಾರೆ. ಇದಕ್ಕೆ ಯಾವ ರೈತರು ಅರ್ಜಿಯನ್ನು ಹಾಕಬಹುದು. ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಸಬ್ಸಿಡಿಯನ್ನ ನೀಡಲಾಗುತ್ತೆ? ಅರ್ಜಿ ಸಲ್ಲಿಕೆ ಅಗತ್ಯಗಳೇನು?
ಏನು ದಾಖಲೆಗಳನ್ನು ನೀಡಬೇಕು, ಎಲ್ಲಿ ಅರ್ಜಿ ಹಾಕಬೇಕು? ಹಾಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವುದು ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ. ಕೃಷಿ ಯಾಂತ್ರೀಕರಣ ಯೋಜನೆಯ ಮುಖಾಂತರ ಅರ್ಹ ರೈತರಿಗೆ ಪವರ್ ಟಿಲ್ಲರ್ ರೋಟೋವೇಟರ್ ಸಸ್ಯ ಸಂಸ್ಕರಣೆ, ಔಷಧ ಸಿಂಪಡಿಸುವ ಯಂತ್ರ, ಚಾಪ್ಕಟರ್ ಹಾಗು ಇನ್ನಿತರ ಉಪಕರಣಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರಿಗೆ ಶೇಕಡ 96 ರಷ್ಟು ರಿಯಾಯಿತಿ ದರದಲ್ಲಿ ಗರಿಷ್ಠ 1,00,000 ರೂ ಮೀರದಂತೆ ಸಹಾಯಧನ ನೀಡಲಾಗುತ್ತದೆ. ಕೃಷಿ ಸಂಸ್ಕರಣೆ ಯೋಜನೆಯ ಮುಖಾಂತರ ರೈತರಿಗೆ 86 ಮೀಟರ್ ಅಳತೆಯಟಲ್ಲಿ ರಾಗಿ ಕ್ಲೀನಿಂಗ್ ಮಷೀನ್ ಗಳು ಹಾಗು ಕ್ಲೋಸ್ ಮೇಲೆ ಎಣ್ಣೆಗಾಣ ಹಾಗೂ ಇತರೆ ಪರಿಕರಗಳನ್ನು.
ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರಿಗೆ ಶೇಕಡ ತೊಂಬತ್ತು ರಷ್ಟು ರಿಯಾಯಿತಿ ದರದಲ್ಲಿ ಗರಿಷ್ಠ 1,00,000 ರೂ ಮೀರದಂತೆ ಸಹಾಯಧನ ನೀಡಲಾಗುತ್ತದೆ. ಭೂ ಜಲ ಯೋಜನೆಯಡಿ ಅರ್ಹ ರೈತರಿಗೆ ತುಂತುರು ನೀರಾವರಿ ಘಟಕವನ್ನು ಶೇಕಡಾ 96 ರಷ್ಟು ರಿಯಾಯಿತಿ ದರದಲ್ಲಿ ಎಲ್ಲ ವರ್ಗದ ರೈತರಿಗೆ ಹಾಗೂ ಹನಿ ನೀರಾವರಿ ಘಟಕಗಳನ್ನು ಸಾಮಾನ್ಯ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಶೇಕಡ 95 ರಷ್ಟು ರಿಯಾಯಿತಿ ದರದಲ್ಲಿ ಹಾಗೂ ಸಾಮಾನ್ಯ ವರ್ಗದ ದೊಡ್ಡ ರೈತರಿಗೆ ಶೇಕಡಾ 45 ರಷ್ಟು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತೆ.
ಫ್ರೆಂಡ್ ಹಾಗೆಯೇ ಕೃಷಿ ಭಾಗ್ಯ ಯೋಜನೆಯ ಮುಖಾಂತರ ಡೀಸೆಲ್ ಪಂಪ್ಸೆಟ್ ಹಾಗೂ ಲಘು ನೀರಾವರಿ ಘಟಕವನ್ನು ಪ್ಯಾಕೇಜ್ ರೂಪದಲ್ಲಿ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇಕಡ ಎಂಬತ್ತರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 95 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಫ್ರೆಂಡ್ ಹಾಗೆ ಈ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಅಗತ್ಯಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಆಗಿದೆ. ಅರ್ಜಿದಾರ ರೈತರು ಕೃಷಿ ಜಮೀನನ್ನು ಹೊಂದಿರಬೇಕು ಮತ್ತು ಕೃಷಿಯನ್ನು ಮಾಡಬೇಕಾಗಿದೆ.
ಎಲ್ಲ ಯೋಜನೆಗಳಿಗೆ, ಅರ್ಜಿಗಳಿಗೆ ನಿಮ್ಮತ್ರ ಇರಬೇಕಾಗಿತ್ತು. ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಆಧಾರ್ ಕಾರ್ಡ್ಬೇಕಾಗುತ್ತೆ ಜಮೀನಿನ ಪಹಣಿಬೇಕಾಗುತ್ತೆ ಬ್ಯಾಂಕ್ ಪಾಸ್ ಪುಸ್ತಕ ಬೇಕಾಗುತ್ತೆ. ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುಬೇಕಾಗುತ್ತೆ. ಜಾತಿ ಪ್ರಮಾಣ ಪತ್ರಬೇಕಾಗುತ್ತೆ. ಆದಾಯ ದೃಢೀಕರಣ ಪತ್ರಬೇಕಾಗುತ್ತೆ. ನಿರಾಪೇಕ್ಷಣ ಪ್ರಮಾಣ ಪತ್ರ ಇಟ್ಟುಕೊಂಡಿರ ಬೇಕಾಗಿರುತ್ತೆ. ವಾಸ ದೃಢೀಕರಣ ಪತ್ರ ಇಟ್ಟುಕೊಂಡಿರಬೇಕಾಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರ ಇಟ್ಟುಕೊಂಡುಬೇಕಾಗಿದೆ. ಇನ್ನಿತರ ದಾಖಲೆಗಳೊಂದಿಗೆ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಇಟ್ಟುಕೊಂಡಿರಬೇಕಾಗಿರುತ್ತದೆ ಹಾಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕಳಗಿರುವ ವಿಡಿಯೋ ವೀಕ್ಷಣೆ ಮಾಡಿ
https://youtu.be/od0M1FQnQSk