ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ ರೈತರು ಸರ್ಕಾರದಿಂದ ಶೇಕಡ ತೊಂಬತ್ತ ರಷ್ಟು ಸಬ್ಸಿಡಿ ಸಹಾಯಧನದೊಂದಿಗೆ ಟ್ರ್ಯಾಕ್ಟರ್ ಅಥವಾ ಟಿಲ್ಲರ್ ಪಡೆದುಕೊಳ್ಳಬಹುದಾಗಿದೆ. ಅಂದರೆ ಕೇವಲ 10% ಮಾತ್ರ ಹಣ ಪಾವತಿಸಿದರೆ ಸರ್ಕಾರದ ಸಹಾಯ ಧನದೊಂದಿಗೆ ನಿಮಗೆ ಸಂಪೂರ್ಣ ಉಚಿತವಾಗಿ ಟ್ರ್ಯಾಕ್ಟರ್, ಟ್ರೈಲರ್ ಮತ್ತು ವಿವಿಧ ಯಂತ್ರೋಪಕರಣಗಳು ದೊರೆಯುತ್ತವೆ. ಬನ್ನಿ, ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ 2024 ಮತ್ತು 25 ನೇ ಸಾಲಿನ ಹೊಸ ಯೋಜನೆಗೆ ಅರ್ಜಿಗಳನ್ನು ಕರೆಯಲಾಗಿತ್ತು.

ಆಸಕ್ತ ಮತ್ತು ಅರ್ಹ ರೈತರು ಅರ್ಜಿಯನ್ನ ಸಲ್ಲಿಸಿ ಸರ್ಕಾರದ ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶಕ್ಕಾಗಿ ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ರೈತರ ಪ್ರತಿಯೊಂದು ಕೆಲಸಕ್ಕೂ ಉಪಯುಕ್ತವಾಗುವ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಲು ಶೇಕಡಾ ತೊಂಭತ್ತರಷ್ಟು ಸಬ್ಸಿಡಿ ಸಹಾಯಧನದೊಂದಿಗೆ ಹೊಸ ಅರ್ಜಿಗಳನ್ನು ಕರೆಯಲಾಗಿತ್ತು.

ರೈತರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯವಾದ ದಾಖಲೆಗಳನ್ನು ಯಾವಾಗ ರೈತರಿಗೆ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳು ದೊರೆಯುತ್ತವೆ ಎನ್ನುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳಲು ಕೊನೆವರೆಗೂ ನೋಡಿ ನೀವು ಕೂಡ ರೈತರಾಗಿದ್ದಾರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ .ಕೃಷಿ ಇಲಾಖೆಯಿಂದ 2024 25 ನೇ ಸಾಲಿನಲ್ಲಿ ಸಹಾಯಧನ ಯೋಜನೆಯಡಿ ಮಿನಿ ಟ್ರ್ಯಾಕ್ಟರ್, ಪವರ್ ವೀಡರ್ ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ರವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇಕಡ ತೊಂಬತ್ತರ ವರೆಗೆ ಸಹಾಯ ಧನ ನೀಡಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆಯ ತುಂತುರು ನೀರಾವರಿ ಘಟಕಗಳಿಗೆ ಎಲ್ಲ ವರ್ಗದ ರೈತರಿಗೆ ಶೇಕಡ 97 ರಷ್ಟು ಸಹಾಯಧನ ಒದಗಿಸಲಾಗುತ್ತದೆ.

ಆಸಕ್ತ ರೈತರು ಅರ್ಜಿಗಳನ್ನು ಸಂಬಂಧಪಟ್ಟ ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಪಡೆದು ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಖರೀದಿಸಲು ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಯಾವೆಲ್ಲಾ ಯಂತ್ರಗಳನ್ನ ಪಡೆಯಲು ಸಬ್ಸಿಡಿ ದೊರೆಯಲಿದೆ ಗೊತ್ತ ಮಿನಿ ಟ್ರ್ಯಾಕ್ಟರ್ ಪವರ್ ಟಿಲ್ಲರ್ ಕಳೆ ಕೊಚ್ಚುವ ಯಂತ್ರ, ಹಾಗೂ ಇನ್ನೂ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *